Advertisement

UPSC ಬೆನ್ನಲ್ಲೇ ಎಸ್‌ಎಸ್‌ಸಿ ಆಧಾರ್‌ ದೃಢೀಕರಣಕ್ಕೆ ಅಸ್ತು

01:08 AM Sep 14, 2024 | Team Udayavani |

ಹೊಸದಿಲ್ಲಿ: ಸಿಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ನೋಂದಣಿ, ಪರೀಕ್ಷೆ, ನೇಮಕಾತಿಯಂಥ ವಿವಿಧ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಗುರುತು ಖಾತರಿಗೆ ಆಧಾರ್‌ಕಾರ್ಡ್‌ ಆಧರಿತ ದೃಢೀಕರಣ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಆಧಾರ್‌ ದೃಢೀಕರಣದ ಮೂಲಕ ಅಭ್ಯರ್ಥಿಗಳ ಗುರುತು ಖಾತರಿಪಡಿಸಿಕೊಳ್ಳಲು ಕೇಂದ್ರ ಸಮ್ಮತಿಸಿದ ಬೆನ್ನಲ್ಲೇ ಎಸ್‌ಎಸ್‌ಸಿಗೂ ಈ ಅನುಮತಿ ನೀಡಿದೆ. ಅಭ್ಯರ್ಥಿಗಳು ಎಸ್‌ಎಸ್‌ಸಿ ನೋಂದಣಿ ಸೇರಿದಂತೆ ಅಗತ್ಯವಿರುವ ಎಲ್ಲ ಹಂತಗಳಲ್ಲಿಯೂ ಸ್ವಯಂಪ್ರೇರಿತರಾಗಿ ಇದಕ್ಕೆ ಸಹಕರಿಸಬೇಕೆಂದು ಸರಕಾರ ಮನವಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next