Advertisement

Tripura: ತ್ರಿಪುರಾ ವಿಧಾನಸಭೆಯಲ್ಲಿ ಕೋಲಾಹಲ

11:05 PM Jul 07, 2023 | Team Udayavani |

ಹೊಸದಿಲ್ಲಿ: ಬಜೆಟ್‌ ಅಧಿವೇಶನದ ವೇಳೆಯೇ ತ್ರಿಪುರಾ ವಿಧಾನಸಭೆಯಲ್ಲಿ ಶುಕ್ರವಾರ ಕೋಲಾಹಲ ಸಂಭವಿಸಿದೆ. ಈ ವರ್ಷದ ಆರಂಭದಲ್ಲಿ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೊ ವೀಕ್ಷಿಸಿದ್ದ, ಬಿಜೆಪಿ ಶಾಸಕ ಜದಾಬ್‌ ಲಾಲ್‌ ದೇಬ್‌ನಾಥ್‌ ವಿರುದ್ಧ ಕ್ರಮ ಕೈಗೊಳ್ಳಲು ವಿಪಕ್ಷ ನಾಯಕರು ಆಗ್ರಹಿಸಿದರು.

Advertisement

ಈ ಪ್ರತಿಭಟನೆ ವೇಳೆ ವಿಪಕ್ಷ ಸದಸ್ಯರು, ಆಡಳಿತ ಪಕ್ಷದ ಸದಸ್ಯರೊಂದಿಗೆ ತಳ್ಳಾಟ ನಡೆಸಿ, ಮೇಜುಗಳ ಮೇಲೆ ನಡೆದರು. ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಸರ್ಕಾರ ಮತ್ತು ಸ್ಪೀಕರ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರು ವಿಪಕ್ಷಗಳ ಐವರು ಸದಸ್ಯರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಿದರಾದರೂ ಕೊನೆಯಲ್ಲಿ ವಿಪಕ್ಷಗಳ ಆಗ್ರಹ, ಪ್ರತಿಭಟನೆಗೆ ಮಣಿದು ಅಮಾನತನ್ನು ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next