Advertisement

Uppunda ಶಾರ್ಟ್ ಸರ್ಕ್ಯೂಟ್: ಅಂಗಡಿ ಭಸ್ಮ

12:55 AM Jul 27, 2024 | Team Udayavani |

ಉಪ್ಪುಂದ : ಆಕಸ್ಮಿಕ ಬೆಂಕಿ ಅವಘಡದಿಂದ ಅಂಗಡಿ ಸಂಪೂರ್ಣ ಸುಟ್ಟು ಹೋದ ಘಟನೆ ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಡೇರಿ ಅಂಗಡಿಹಿತ್ಲಿನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

Advertisement

ರಾಮ ಪೂಜಾರಿ ಅವರ ಕಟ್ಟಡದಲ್ಲಿ ಚಂದ್ರ ಅವರು ದಿನಸಿ ವ್ಯಾಪಾರ ಮಾಡಿಕೊಂಡಿದ್ದರು. ಎಂದಿನಂತೆ ಜು. 25ರ ರಾತ್ರಿ ವ್ಯವಹಾರ ಮುಗಿಸಿ ಮನೆಗೆ ಹೋಗಿದ್ದರು. ರಾತ್ರಿ ವೇಳೆಯಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಬೆಳಗ್ಗೆ ಸಮಯದಲ್ಲಿ ಜನರು ವಾಕಿಂಗ್‌ ಹೋಗುವಾಗ ನೋಡಿದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗ್ಗೆ ಸುಮಾರು 2.30ರ ಹೊತ್ತಿಗೆ ಭಾರೀ ಗಾಳಿ ಮಳೆ ಬಂದಾಗ ವಿದ್ಯುತ್‌ ನಿಲುಗಡೆ ಆಗಿತ್ತು. ಬಳಿಕ ಬಂದಿರಲಿಲ್ಲ. ಅದಕ್ಕೂ ಮೊದಲೇ ದುರಂತ ನಡೆದಿರುವ ಸಾಧ್ಯತೆ ಇದೆ. ಅಪಾರ ಪ್ರಮಾಣದ ಪುಸ್ತಕ, ದಿನಸಿ ವಸ್ತುಗಳು, ಟೇಬಲ್ , ಫ್ರಿಜ್‌ ಇತ್ಯಾದಿ ಸುಟ್ಟು ಕರಕಲಾಗಿ ಹೋಗಿತ್ತು. ಸುಮಾರು 4ರಿಂದ 5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next