Advertisement

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

09:50 PM May 21, 2024 | Team Udayavani |

ಉಪ್ಪುಂದ: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ 20ರಂದು ಕೆರ್ಗಾಲ್‌ ಗ್ರಾಮದಲ್ಲಿ ಸಂಭವಿಸಿದೆ.

Advertisement

ಗ್ರಾಮದ ಕಂಠದ ಮನೆ ನಿವಾಸಿ ಮಾಧವ (53) ಮೃತರು.

ಅವರು ಮೇ 20ರಂದು ಬೆಳಗ್ಗೆ ಕೂಲಿ ಕೆಲಸಕ್ಕಾಗಿ ಮನೆಯಿಂದ ಹೋಗಿದ್ದು, ಸುಮಾರು 10 ಗಂಟೆಗೆ ಗ್ರಾಮದ ಪರಿಚಯ ಹೊಟೇಲ್‌ ಸಮೀಪದ ಸರ್ವಿಸ್‌ ರಸ್ತೆಯಲ್ಲಿ. ಬಿದ್ದಿದ್ದು ಮೃತಪಟ್ಟಿದ್ದರು. ಅವರಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಮೃತಪಟ್ಟಿರಬಹುದೆಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಾಕೆರೆ: ಬೈಕ್‌ ಕಳವು
ಉಪ್ಪುಂದ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ ಕಳವು ಆದ ಘಟನೆ ಬಡಾಕೆರೆಯಲ್ಲಿ ನಡೆದಿದೆ.

ರೈಲ್ವೇ ಇಲಾಖೆಯಲ್ಲಿ ಟ್ರ್ಯಾಕ್‌ಮನ್‌ ಆಗಿ ಕೆಲಸ ಮಾಡಿಕೊಂಡಿದ್ದ ದಿನೇಶ್‌ ಅವರು ಬಡಾಕೆರೆ ಟ್ರ್ಯಾಕ್‌ ಬಳಿ ಹುಲ್ಲಿಗೆ ಬೆಂಕಿ ಬಿದ್ದಿದೆ ಸ್ಥಳಕ್ಕೆ ಹೋಗಿ ಬನ್ನಿ ಎಂಬ ಮೇಲಾಧಿಕಾರಿಗಳ ಮಾಹಿತಿಯಂತೆ ಬಡಾಕೆರೆಗೆ ಹೋಗಿ ರೈಲ್ವೇ ಸೇತುವೆ ಬಳಿ ಗೇರು ಪ್ಲಾಂಟೇಶನ್‌ ಬದಿಯಲ್ಲಿ ಬೈಕ್‌ನ್ನು ನಿಲ್ಲಿಸಿ ಬೆಂಕಿ ಬಿದ್ದಲ್ಲಿಗೆ ಹೋಗಿ ಬೆಂಕಿಯನ್ನು ನಂದಿಸಿ ಬರುವಾಗ ಬೈಕ್‌ ಇಟ್ಟ ಸ್ಥಳದಲ್ಲಿ ಇಲ್ಲದೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಯಾರೋ ಕಳ್ಳರು ಕಳವು ಮಾಡಿರುವುದಾಗಿ ಅವರುಬೈಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next