Advertisement

Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು

11:56 PM May 14, 2024 | Team Udayavani |

ಉಪ್ಪಿನಂಗಡಿ: ತೀವ್ರಗೊಂಡಿರುವ ಬಿಸಿಲ ಬೇಗೆಯ ನಡುವೆ ಅಲ್ಲಲ್ಲಿ ಮಳೆ ಸುರಿಯುತ್ತಿದ್ದರೂ ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕುಸಿತವಾಗಿರುವುದರಿಂದ ಮೇಲ್ಭಾಗದಲ್ಲಿರುವ ಬಿಳಿಯೂರು ಅಣೆಕಟ್ಟಿನಿಂದ ಸೋಮವಾರ ಪೂರ್ಣ ಪ್ರಮಾಣದಲ್ಲಿ ನೀರನ್ನು ಹರಿಯ ಬಿಡಲಾಗಿದೆ. ಪರಿಣಾಮ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಒಡಲು ಬರಿದಾಗಿದೆ.

Advertisement

ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಶಿವಪ್ರಸನ್ನ ಅವರು ಪ್ರತಿಕ್ರಿಯೆ ನೀಡಿ, ಬಿಳಿಯೂರು ಅಣೆಕಟ್ಟಿನಲ್ಲಿದ್ದ ನೀರನ್ನು ಹರಿಯ ಬಿಡಬೇಕೆಂದು ಜಿಲ್ಲಾಡಳಿತದಿಂದ ನಿರ್ದೇಶನ ಬಂದಿದ್ದು ಸೋಮವಾರ ಎಲ್ಲ ಗೇಟುಗಳನ್ನು ತೆರೆಯಲಾಗಿದೆ. 1.5 ಮೀಟರ್‌ ಎತ್ತರದ ನೀರಿನ ಸಂಗ್ರಹ ಸಂಪೂರ್ಣ ಹರಿದು ಹೋಗಿದೆ. ಮುಂಬರುವ ಮಳೆಗಾಲದ ಕಾರಣಕ್ಕೆ ಮತ್ತೆ ಗೇಟುಗಳನ್ನು ಅಳವಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next