Advertisement

Uppinangady ಗೃಹಿಣಿಯ ಕೊಲೆ: ಹತ್ತು ವರ್ಷವಾದರೂ ಪತ್ತೆಯಾಗದ ಕೊಲೆ ಆರೋಪಿ

11:21 PM Jun 05, 2024 | Team Udayavani |

ಉಪ್ಪಿನಂಗಡಿ: ಹಾಡುಹಗಲೇ ಗೃಹಿಣಿಯೋರ್ವರ ಕೊಲೆ ನಡೆದು ಹತ್ತು ವರ್ಷ ಸಂದರೂ ಪೊಲೀಸ್‌ ಇಲಾಖೆಗೆ ಇನ್ನೂ ಪ್ರಕರಣ ಭೇದಿಸಲಾಗದೇ ಹಳ್ಳ ಹಿಡಿಯುವಂತಾಗಿದ್ದು ಕೊಲೆಗಡುಕರನ್ನು ಪತ್ತೆ ಹಚ್ಚಲು ಅಸಾಧ್ಯವಾಗಿದೆ.

Advertisement

ಪುತ್ತೂರು ತಾಲೂಕಿನ ಹಿರೆಬಂಡಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಗುರುಮೂರ್ತಿ ಅವರ ಪತ್ನಿ ಪುಷ್ಪಲತಾ ಉಪ್ಪಿನಂಗಡಿಯ ಬಾಡಿಗೆ ಮನೆಯಲ್ಲಿ 2014ರ ಜೂ. 5ರಂದು ಕತ್ತು ಇರಿಯಲ್ಪಟ್ಟ ಸ್ಥಿತಿಯಲ್ಲಿ ಕೊಲೆಗೀಡಾಗಿದ್ದರು. ಕೊಲೆ ಆರೋಪಿಯ ಪತ್ತೆಗಾಗಿ ಪೊಲೀಸರು ಸತತ ಪ್ರಯತ್ನ ನಡೆಸಿದ್ದರೂ ಯಾವುದೇ ಯಶಸ್ಸು ಸಿಕ್ಕಿರಲಿಲ್ಲ.

ಪುಷ್ಪಲತಾ ಕೊಲೆ ಪ್ರಕರಣದ ಹಂತಕರನ್ನು ಪತ್ತೆ ಹಚ್ಚಲು ಅಗ್ರಹಿಸಿ ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರೂ ಈ ಹತ್ತು ವರ್ಷದ ಅವಧಿಯಲ್ಲಿ ಯಾವುದೇ ಫ‌ಲಶ್ರುತಿ ಕಾಣಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next