Advertisement

ಉಪ್ಪಳ: ಕಾರು –ಲಾರಿ ಢಿಕ್ಕಿ; ಚಾಲಕ ಗಂಭೀರ

11:58 PM Apr 25, 2023 | Team Udayavani |

ಕುಂಬಳೆ: ಉಪ್ಪಳ ಭಗವತಿ ಗೇಟ್‌ ಹೆದ್ದಾರಿಯಲ್ಲಿ ಮಂಗಳೂರಿನಿಂದ ಕೇರಳಕ್ಕೆ ತೆರಳುವ ಕಾರು ಮತ್ತು ಕೇರಳದಿಂದ ಕರ್ನಾಟಕಕ್ಕೆ ತೆರಳುತ್ತಿದ್ದ ಲಾರಿ ಪರಸ್ಪರ ಢಿಕ್ಕಿಯಾಗಿ ಕಾರು ಚಾಲಕ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಢಿಕ್ಕಿಯ ರಭಸಕ್ಕೆ ಕಾರು ಪೂರ್ತಿ ನಜ್ಜುಗುಜ್ಜಾಗಿದ್ದು ಲಾರಿಯ ಮುಂಭಾಗವೂ ನುಜ್ಜುಗುಜ್ಜಾಗಿ ಲಾರಿಯ ಟಯರ್‌ ಕಳಚಿ ಬಿದ್ದಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಗಾಯಾಳುವಿನ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅಪಘಾತ ನಡೆದು ಹೆದ್ದಾರಿ ಗಂಟೆಗಟ್ಟಲೆ ಬ್ಲಾಕ್‌ ಆಗಿದ್ದು, ಪೊಲೀಸರು ರಸ್ತೆ ತಡೆ ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next