Advertisement

Uppala ವರದಕ್ಷಿಣೆಗಾಗಿ ಕಿರುಕುಳ: ಪತಿ ಸಹಿತ ಮೂವರ ವಿರುದ್ಧ ಕೇಸು ದಾಖಲು

11:22 PM Dec 13, 2023 | Team Udayavani |

ಉಪ್ಪಳ: ವರದಕ್ಷಿಣೆಗಾಗಿ ಒತ್ತಾಯಿಸಿ ಕಿರುಕುಳ ನೀಡಿದ ಸಂಬಂಧ ಆಕೆಯ ಪತಿ ಕರ್ನಾಟಕದ ಕುತ್ತಡ್ಕ ನಿವಾಸಿ ರಕ್ಷಿತ್‌ (34), ಈತನ ತಾಯಿ ಪದ್ಮಾವತಿ (55) ಮತ್ತು ಸಹೋದರ ರಾಹುಲ್‌ (30) ವಿರುದ್ಧ ನ್ಯಾಯಾಲಯದ ಆದೇಶದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಉಪ್ಪಳ ಕೋಡಿಬೈಲು ನಿವಾಸಿ ಬಾಬು ಅವರ ಪುತ್ರಿ ವನಿತಾ ಕುಮಾರಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. 2021ರ ಫೆಬ್ರವರಿ ತಿಂಗಳಲ್ಲಿ ವನಿತಾ ಕುಮಾರಿ ಹಾಗೂ ರಕ್ಷಿತ್‌ ಅವರ ವಿವಾಹವಾಗಿತ್ತು. ಈ ಸಂದರ್ಭದಲ್ಲಿ 20 ಪವನ್‌ ಚಿನ್ನಾಭರಣ ಹಾಗೂ 1 ಲಕ್ಷ ರೂ. ನೀಡಲಾಗಿತ್ತೆ¤ಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಅನಂತರ ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿ ಪತಿ ಸಹಿತ ಮೂವರು ಕಿರುಕುಳ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಮದ್ಯ, ಗಾಂಜಾ ವಶಕ್ಕೆ
ಕಾಸರಗೋಡು: ಅಬಕಾರಿ ಇಲಾಖೆಯ ತಂಡ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ಮಾತ್ರೆ, ಗಾಂಜಾ, ಮದ್ಯ ಸಹಿತ ರಿಕ್ಷಾ, ಬೈಕ್‌ ವಶಪಡಿಸಿಕೊಂಡಿದೆ.

ಉಳಿಯತ್ತಡ್ಕದಿಂದ ಆಟೋರಿಕ್ಷಾ ವೊಂದರಿಂದ 50 ಗ್ರಾಂ ಗಾಂಜಾ ಮತ್ತು ಅಮಲೇರಿಸಲು ಬಳಸುವ 210 ಮಾತ್ರೆಗಳು, ಮೊಬೈಲ್‌ ವಶ ಪಡಿಸಿಕೊಂಡಿದೆ. ಅಟೋದಲ್ಲಿದ್ದ ಉಳಿ ಯತ್ತಡ್ಕ ಮೊಹಮ್ಮದ್‌ ರಾಫಿ (33) ಪರಾರಿಯಾಗಿದ್ದಾನೆ. ಆಟೋ ರಿಕ್ಷಾ ವಶಪಡಿಸಿಕೊಂಡಿದೆ.

ಬೆಳಿಂಜ ಶಾಂತಿಮೂಲೆ ಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 5.4 ಲೀಟರ್‌ ಮದ್ಯ ವಶಪಡಿಸಿಕೊಂಡು ಮಲ್ಲಾವರದ ಮಾಲಿಂಗನ ವಿರುದ್ಧ ಕೇಸು ದಾಖಲಿಸಿದೆ. ಬೈಕನ್ನು ವಶಪಡಿಸಿದೆ. ಹೊಸದುರ್ಗ ಪುಲ್ಲೂರು ಕರಕುಕುಂಡ್‌ನ‌ಲ್ಲಿ 7.5 ಲೀಟರ್‌ ಮದ್ಯ ವಶಪಡಿಸಿಕೊಂಡಿದೆ. ಪಡನ್ನ ಆಲಕ್ಕಲ್‌ನಿಂದ 50 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next