Advertisement
ಉಪ್ಪಳ ಕೋಡಿಬೈಲು ನಿವಾಸಿ ಬಾಬು ಅವರ ಪುತ್ರಿ ವನಿತಾ ಕುಮಾರಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. 2021ರ ಫೆಬ್ರವರಿ ತಿಂಗಳಲ್ಲಿ ವನಿತಾ ಕುಮಾರಿ ಹಾಗೂ ರಕ್ಷಿತ್ ಅವರ ವಿವಾಹವಾಗಿತ್ತು. ಈ ಸಂದರ್ಭದಲ್ಲಿ 20 ಪವನ್ ಚಿನ್ನಾಭರಣ ಹಾಗೂ 1 ಲಕ್ಷ ರೂ. ನೀಡಲಾಗಿತ್ತೆ¤ಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಅನಂತರ ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿ ಪತಿ ಸಹಿತ ಮೂವರು ಕಿರುಕುಳ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಸರಗೋಡು: ಅಬಕಾರಿ ಇಲಾಖೆಯ ತಂಡ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ಮಾತ್ರೆ, ಗಾಂಜಾ, ಮದ್ಯ ಸಹಿತ ರಿಕ್ಷಾ, ಬೈಕ್ ವಶಪಡಿಸಿಕೊಂಡಿದೆ. ಉಳಿಯತ್ತಡ್ಕದಿಂದ ಆಟೋರಿಕ್ಷಾ ವೊಂದರಿಂದ 50 ಗ್ರಾಂ ಗಾಂಜಾ ಮತ್ತು ಅಮಲೇರಿಸಲು ಬಳಸುವ 210 ಮಾತ್ರೆಗಳು, ಮೊಬೈಲ್ ವಶ ಪಡಿಸಿಕೊಂಡಿದೆ. ಅಟೋದಲ್ಲಿದ್ದ ಉಳಿ ಯತ್ತಡ್ಕ ಮೊಹಮ್ಮದ್ ರಾಫಿ (33) ಪರಾರಿಯಾಗಿದ್ದಾನೆ. ಆಟೋ ರಿಕ್ಷಾ ವಶಪಡಿಸಿಕೊಂಡಿದೆ.
Related Articles
Advertisement