Advertisement

Uppala ಅಸೌಖ್ಯ: ಪಿಯು ವಿದ್ಯಾರ್ಥಿನಿ ಸಾವು

01:07 AM Jul 12, 2024 | Team Udayavani |

ಉಪ್ಪಳ: ಮೂಲತಃ ಸೋಂಕಾಲು ಬಳಿಯ ಕೊಡಂಗೆ ಯವರಾಗಿದ್ದು, ಪ್ರಸ್ತುತ ಮಂಗಳೂರಿನ ಕೋಟೆಕಾರಿನಲ್ಲಿ ವಾಸವಾಗಿದ್ದ‌ ಇಂಚರ (16) ಅವರು ಕರುಳು ಸಂಬಂಧಿ ಸಮಸ್ಯೆಯಿಂದ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಸೋಂಕಾಲಿನ ವ್ಯಾಪಾರಿ ಹರೀಶ ದಾಸ್‌ ಅವರ ಪುತ್ರಿಯಾಗಿದ್ದ ಈಕೆ ಉಳ್ಳಾಲ ಪರಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದರು.

ಪೋಕ್ಸೋ ಪ್ರಕರಣ ದಾಖಲು
ಕಾಸರಗೋಡು: ಹೆತ್ತವರ ಜತೆ ದರ್ಗಾವೊಂದಕ್ಕೆ ಬಂದ 15ರ ಹರೆಯದ ಬಾಲಕಿಗೆ ದೈಹಿಕ ಕಿರುಕುಳ ನೀಡಿದ ವ್ಯಕ್ತಿಯೊಬ್ಬನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.2022ರಲ್ಲಿ ಈ ಘಟನೆ ನಡೆದಿದೆ. ಮಡಿಕೇರಿ ಸಮೀಪದ ಬಾಲಕಿ ಈ ದೂರು ನೀಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next