Advertisement

ಉಪ್ಪಳ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

11:52 PM Feb 11, 2023 | Team Udayavani |

ಉಪ್ಪಳ: ಮೊದಲ ಪತ್ನಿಗೆ ತಿಳಿಯದೆ 2ನೇ ವಿವಾಹವಾದ ಪ್ರಕರಣದಲ್ಲಿ 8 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಪುತ್ತೂರು ದರ್ಬೆ ನಿವಾಸಿ ಅಬ್ದುಲ್‌ ಹಮೀದ್‌(50)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

Advertisement

ಈತ ಈ ಮೊದಲು ಮಂಜೇಶ್ವರ ಠಾಣೆ ವ್ಯಾಪ್ತಿಯ ಯುವತಿಯನ್ನು ವಿವಾಹವಾಗಿದ್ದ. ಬಳಿಕ ಆಕೆಗೆ ತಿಳಿಯದೆ ಬೇರೊಬ್ಬಳು ಯುವತಿಯನ್ನು 2014ರಲ್ಲಿ ವಿವಾಹ ವಾಗಿದ್ದನೆಂದು ಮಂಜೇಶ್ವರ ಪೊಲೀಸರಿಗೆ ಮೊದಲ ಪತ್ನಿ ದೂರು ನೀಡಿದ್ದಳು. ಇದರಂತೆ ಆರೋಪಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ತಲೆಮರೆಸಿಕೊಂಡಿದ್ದ ಈತನ ಈತನ ವಿರುದ್ಧ ನ್ಯಾಯಾಲಯ ವಾರೆಂಟ್‌ ಹೊರಡಿಸಿತ್ತು. ಈತ ಪುತ್ತೂರಿ ನಲ್ಲಿರುವ ಮಾಹಿತಿ ಪಡೆದು ಅಲ್ಲಿಗೆ ತೆರಳಿದ ಮಂಜೇಶ್ವರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next