Advertisement
ನಾಯಕ ನಟ ಉಪೇಂದ್ರ ಅವರು ಈ ಸಿನಿಮಾ ಬಗ್ಗೆ ಯಾವುದೇ ಟೆನ್ಸ್ನ್ ಇಲ್ಲದೇ ಆರಾಮವಾಗಿದ್ದಾರಂತೆ. ಅದಕ್ಕೆ ಕಾರಣ ಆರ್.ಚಂದ್ರು. “ಚಂದ್ರು ಸಿನಿಮಾ ಎಂದ ಮೇಲೆ ನಾವು ಟೆನ್ಸ್ನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಹಾಗಾಗಿ, ನಾನು ನನ್ನ ಕೆಲಸದಲ್ಲಿ ಬಿಝಿಯಾಗಿದ್ದೇನೆ. ಚಂದ್ರು ಅವರಿಗೆ ಸಿನಿಮಾವನ್ನು ಹೇಗೆ ಪ್ರಮೋಶನ್ ಮಾಡಬೇಕು, ಜನರಿಗೆ ಹೇಗೆ ತಲುಪಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಸಿನಿಮಾಕ್ಕಾಗಿ ಅವರು ತುಂಬಾ ಕಷ್ಟಪಡುತ್ತಾರೆ’ ಎಂದರು. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಸೋನು ಗೌಡ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. “ಈ ಚಿತ್ರದ ಪೋಸ್ಟರ್ನಲ್ಲಿ ನನ್ನ ಫೋಟೋ ಇಲ್ಲ. ಟ್ರೇಲರ್, ಹಾಡಿನಲ್ಲೂ ನನ್ನನ್ನು ತೋರಿಸಿಲ್ಲ. ಹೀಗಿರುವಾಗ ನನ್ನನ್ನು ಪ್ರಮೋಶನ್ಗೆ ಯಾಕೆ ಕರೀತಾರೆ, ನಾನ್ಯಾಕೆ ಹೋಗಬೇಕೆಂದು ಮೊದಲು ಅನಿಸಿತ್ತು. ಆ ನಂತರ ನಾನೇ ಅರ್ಥ ಮಾಡಿಕೊಂಡೆ. ಕೋಟಿಗಟ್ಟಲೇ ಖರ್ಚು ಮಾಡುವ ಚಿತ್ರತಂಡ ಪೋಸ್ಟರ್ನಲ್ಲಿ ನನ್ನನ್ನು ಬಳಸದಿರಲು ಏನಾದರೊಂದು ಕಾರಣವಿರಬಹುದು, ನನ್ನ ಪಾತ್ರದ ಗುಟ್ಟುಬಿಟ್ಟು ಕೊಡಬಾರದೆಂಬ ಲೆಕ್ಕಾಚಾರವಿರಬಹುದೆಂದು. ಹಾಗಾಗಿ, ನಾನು ಪ್ರಮೋಶನ್ನಲ್ಲಿ ಭಾಗವಹಿಸುತ್ತಿದ್ದೇನೆ. ಕೇವಲ ಪೋಟೋ ಹಾಕಿಲ್ಲ ಎಂದ ಗಲಾಟೆ ಮಾಡುವುದರಲ್ಲಿ ಅರ್ಥವಿಲ್ಲ. “ಐ ಲವ್ ಯು’ ಸಿನಿಮಾದಲ್ಲಿನ ನನ್ನ ಪಾತ್ರದ ತೀವ್ರತೆಯ ಅರಿವು ನನಗಿದೆ. ಆ ಪಾತ್ರ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವೂ ಇದೆ. ಉಪೇಂದ್ರ ಅಭಿಮಾನಿಗಳಿಗೂ ನನ್ನ ಪಾತ್ರ ಇಷ್ಟವಾಗುತ್ತದೆ’ ಎಂದರು. ಇನ್ನು, ಚಂದ್ರು ಗುರುಗಳಾದ ರಾಜೇಂದ್ರ, ಕಥೆ ಕೇಳಿ ಫಿದಾ ಆದ ಡಾ.ಮಂಜುನಾಥ್ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. Advertisement
ಐ ಲವ್ ಯು ಹೇಳಲು ಉಪ್ಪಿ ರೆಡಿ
12:30 AM Mar 15, 2019 | |
Advertisement
Udayavani is now on Telegram. Click here to join our channel and stay updated with the latest news.