Advertisement

ಯುಪಿಗೆ 7 ಹಂತ: ಬಿಜೆಪಿಗೆ ಲಕ್‌!

12:20 AM Apr 01, 2019 | Team Udayavani |

ನವದೆಹಲಿ: ಹಿಂದೂ ಧರ್ಮದಲ್ಲಿ 7ನೇ ಸಂಖ್ಯೆ ಶುಭ ಸೂಚಕವಾಗಿದ್ದು, ಉತ್ತರ ಪ್ರದೇಶದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯೂ 7 ಹಂತಗಳಲ್ಲಿ ನಡೆಯುತ್ತಿರುವುದರಿಂದ ಆ ರಾಜ್ಯದಲ್ಲಿ ಬಿಜೆಪಿಗೆ ಈ ಬಾರಿ ಭಾರೀ ಅದೃಷ್ಟ ಒಲಿದುಬರಲಿದೆ” ಎಂದು ಉತ್ತರ ಪ್ರದೇಶ ಬಿಜೆಪಿಯ ಮಾಧ್ಯಮ ಸಂಚಾಲಕ ರಾಕೇಶ್‌ ತ್ರಿಪಾಠಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ರವಿವಾರ, ಮಾತನಾಡಿದ ಅವರು, “”ಸೂರ್ಯನ ಬೆಳಕು 7 ವರ್ಣಗಳನ್ನು ಒಳಗೊಂಡಿದೆ. ಸಂಗೀತವು ಸಪ್ತ ಸ್ವರಗಳಿಂದ ಕೂಡಿದೆ. ಹಿಂದೂಗಳ ಮದುವೆಯಲ್ಲಿ ಸಪ್ತಪದಿ ತುಳಿಯಲಾಗುತ್ತದೆ. ಹೀಗೆ, 7ನೇ ಅಂಕಿಗೆ ಹಿಂದೂಗಳ ಆಚರಣೆಯಲ್ಲಿ ಮಹತ್ವದ ಸ್ಥಾನವಿದೆ. ಬಿಜೆಪಿಗೂ ಸಹ 7ನೇ ಅಂಕಿ ಅದೃಷ್ಟ ಸಂಖ್ಯೆಯಾಗಿದ್ದು, 7 ಹಂತಗಳಲ್ಲಿ ನಡೆಯ ಲಿರುವ ಚುನಾವಣೆ ಪಕ್ಷದ ಪಾಲಿಗೆ ಅದೃಷ್ಟ ತರುತ್ತದೆ. ಇನ್ನು, ಈ 7 ಹಂತಗಳ ಮತದಾನ ಪಶ್ಚಿಮದಿಂದ ಶುರುವಾಗಿ ಪೂರ್ವದ ಕಡೆಗೆ (ಏರಿಕೆ ಕ್ರಮದಲ್ಲಿ) ಸಾಗುವುದೂ ಅದೃಷ್ಟದ ಸಂಕೇತವೇ ಆಗಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next