Advertisement
ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್ ಮೈತ್ರಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೋಯ್ಡಾ ಕ್ಷೇತ್ರದಿಂದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್, ಮಥುರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಪ್ರದೀಪ್ ಮಾಥೂರ್, ತಾನಾಭವನ್ನಿಂದ ಬಿಜೆಪಿಯ ವಿವಾದಿತ ಶಾಸಕ ಸುರೇಶ್ ರಾಣಾ ಮುಖ್ಯವಾಗಿ ಕಣದಲ್ಲಿದ್ದಾರೆ.
ಉತ್ತರ ಪ್ರದೇಶದ ಬುಲಾಂದ್ ಶಹರ್ನಲ್ಲಿ ನಡೆದ ಗ್ಯಾಂಗ್ರೇಪ್ ಅಪರಾಧಿಗಳನ್ನು ಬಂಧಿಸಲು ವಿಫಲವಾದ ಎಸ್ಪಿ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಉಮಾಭಾರತಿ ಗುಡುಗಿದ್ದಾರೆ. “ಯಾರು ಬಲತ್ಕಾರದಂಥ ದುಷ್ಕೃತ್ಯ ಎಸಗುತ್ತಾರೋ, ಅಂಥವರನ್ನು ಉಲ್ಟಾ ನೇತು ಹಾಕಬೇಕು. ಚರ್ಮ ಸುಲಿಯುವ ತನಕ ಅವರನ್ನು ಥಳಿಸಬೇಕು. ರಕ್ತ ಸೋರುತ್ತಿರುವ ಆ ಗಾಯಕ್ಕೆ ಉಪ್ಪು ಮತ್ತು ಖಾರದ ಪುಡಿಯನ್ನು ಸವರಬೇಕು’ ಎಂದು ಅವರು ಹೇಳಿದ್ದಾರೆ.