Advertisement

UP Police;ಕನ್ವರ್‌ ಯಾತ್ರೆ ಮಾರ್ಗದ ಹೊಟೇಲ್‌ ಮಾಲಕರ ಹೆಸರು ಪ್ರದರ್ಶನ ಕಡ್ಡಾಯ!

12:59 AM Jul 19, 2024 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿ ಕನ್ವರ್‌ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೊಟೇಲ್‌ಗ‌ಳು ಮುಂಭಾಗದಲ್ಲಿ ಅವುಗಳ ಮಾಲಕರ ಹೆಸರಿನ ಫ‌ಲಕ ಹಾಕಬೇಕೆಂದು ಉತ್ತರ ಪ್ರದೇಶದ ಪೊಲೀಸರು ಆದೇಶಿಸಿದ್ದಾರೆ. ಈ ವಿಚಾರವೀಗ ವಿವಾದಕ್ಕೀಡಾಗಿದ್ದು, ಇದನ್ನು ‘ಹಿಟ್ಲರ್‌ ನೀತಿ’ ಎಂದು ಟೀಕಿಸಲಾಗಿದೆ.

Advertisement

ಶ್ರಾವಣ ಮಾಸದಲ್ಲಿ ನಡೆಯುವ ಯಾತ್ರೆ ವೇಳೆ ಸಾವಿರಾರು ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫ‌ರ್‌ ನಗರದ ಮಾರ್ಗವಾಗಿ ಸಾಗುತ್ತಾರೆ. ಈ ವೇಳೆ ಯಾತ್ರಿಕರಿಗೆ ಗೊಂದಲವಾಗದಂತೆ, ಭವಿಷ್ಯದಲ್ಲಿ ಯಾವುದೇ ಆರೋಪ ಕೇಳಿ ಬರದಂತೆ ತಡೆಯಲು ಹೊಟೇಲ್‌, ಢಾಬಾ, ರಸ್ತೆಬದಿಯ ತಳ್ಳುಗಾಡಿಗಳು ತಮ್ಮ ಮಾಲಕರ ಹೆಸರನ್ನು ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿ ಎಂದು ಪೊಲೀಸರು ಆದೇಶಿಸಿದ್ದರು.

ಈ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. “ಕನ್ವರ್‌ ಯಾತ್ರಿಕರು ಮುಸಲ್ಮಾನರ ಅಂಗಡಿಗಳಿಗೆ ವ್ಯಾಪಾರ ಮಾಡಬಾರದು ಎಂಬುದು ಇದರ ಉದ್ದೇಶ’ ಎಂದು ಟ್ವೀಟ್‌ ಮಾಡಿದ್ದಾರೆ. ಬಾಲಿವುಡ್‌ ಸಾಹಿತಿ ಜಾವೇದ್‌ ಅಕ್ತರ್‌ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಯಾವುದೇ ಧರ್ಮ ತಾರತಮ್ಯದ ಉದ್ದೇಶದಿಂದ ಈ ಆದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next