Advertisement

Lodheshwar Mahadev Temple; ಶಿವಲಿಂಗದ ಸಮೀಪ ಕೈತೊಳೆದ ಸಚಿವ

08:19 PM Sep 04, 2023 | Team Udayavani |

ಲಕ್ನೋ: ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ರಾಮನಗರ ತಾಲೂಕಿನಲ್ಲಿ ಐತಿಹಾಸಿಕ ಲೋಧೇಶ್ವರ ಮಹದೇವ ದೇಗುಲದಲ್ಲಿ ಶಿವಲಿಂಗದ ಸಮೀಪ ಆಹಾರ ಸಚಿವ ಸತೀಶ್‌ ಶರ್ಮಾ ಕೈತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. |

Advertisement

ಸಚಿವರ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ನೆರೆ ಪರಿಹಾರ ಕ್ರಮಗಳ ಪರಿಶೀಲನೆಗಾಗಿ ತಾಲೂಕಿಗೆ ಆ.27ರಂದು ಸತೀಶ್‌ ಶರ್ಮಾ ಹಾಗೂ ಸಚಿವ ಜಿತಿನ್‌ ಪ್ರಸಾದ್‌ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಮೀಪದ ಲೋಧೇಶ್ವರ ದೇಗುಲಕ್ಕೆ ತೆರಳಿದ್ದಾರೆ.

ಯೋಗಿ ಆದಿತ್ಯನಾಥ್‌ ಸರ್ಕಾರದಲ್ಲಿ ಸಚಿವರು ಶಿವಲಿಂಗದ ಮೇಲೆ ಕೈತೊಳಿದಿದ್ದಾರೆ. ಅವರು ಬಿಜೆಪಿಯಲ್ಲಿರುವ ಕಾರಣ ಏನು ಮಾಡಿದರೂ ಸರಿ ಆಗುತ್ತದೆಯೇ ಎಂದು ಆರ್‌ಎಲ್‌ಡಿ ನಾಯಕ ಪ್ರಶಾಂತ್‌ ಕನೋಜಿಯಾ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next