Advertisement

ಕ್ರಿಸ್‌ಮಸ್‌ ಆಚರಿಸಬೇಡಿ: ಆಲಿಗಢ ಶಾಲೆಗಳಿಗೆ ಹಿಂದು ಜಾಗರಣ ಮಂಚ

11:36 AM Dec 19, 2017 | udayavani editorial |

ಲಕ್ನೋ : ಹಿಂದೂ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿರುವ ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯಲ್ಲಿನ ಶಾಲೆಗಳಿಗೆ ಹಿಂದೂ ಜಾಗರಣ ಮಂಚ (ಎಚ್‌ಜೆಎಂ) ಪತ್ರವೊಂದನ್ನು ಬರೆದು “ಕ್ರಿಸ್‌ಮಸ್‌ ಆಚರಿಸ ಕೂಡದು; ಒಂದು ವೇಳೆ ಆಚರಿಸಿದಲ್ಲಿ ಅದರಿಂದಾಗುವ ತೊಂದರೆಗಳಿಗೆ ನೀವೇ ಹೊಣೆಗಾರರಾಗುತ್ತೀರಿ” ಎಂಬ ಬೆದರಿಕೆಯನ್ನು ಹಾಕಿದೆ.

Advertisement

ಆಲೀಗಢ ಜಿಲ್ಲೆಯ ಶಾಲೆಗಳಿಗೆ ಈ ರೀತಿಯ ಬೆದರಿಕೆ ಪತ್ರ ಬರೆದಿರುವ ಹಿಂದೂ ಜಾಗರಣ ಮಂಚದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರ ಜಾಗ್ರತೆಯ ಮೌನ ವಹಿಸಿದೆ. 

ಕೆಲ ದಿನಗಳ ಹಿಂದಷ್ಟೇ ಮಧ್ಯ ಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಪೊಲೀಸ್‌ ಠಾಣೆಯೊಂದರ ಹೊರಗೆ ಬಜರಂಗ ದಳವು ಕ್ರೈಸ್ತ ಪಾದ್ರಿಯವರ ಕಾರಿಗೆ ಬೆಂಕಿ ಹಚ್ಚಿತ್ತು.  ಮತಾಂತರದ ಉದ್ದೇಶದಿಂದ ಮಕ್ಕಳು ಕ್ಯಾರೋಲ್‌ ಹಾಡುವಂತೆ ಮಾಡಲಾಗುತ್ತಿದೆ ಎಂದು ಕ್ರೈಸ್ತ ಸಮೂಹವೊಂದರ ವಿರುದ್ಧ ಆರೋಪ ಮಾಡಿದ್ದ  ಬಜರಂಗ ದಳ ಕ್ಯಾರೋಲ್‌ ಹಾಡಿಸದಂತೆ ಬೆದರಿಕೆ ಹಾಕಿತ್ತು. 

ಈ ಹಿನ್ನೆಲೆಯಲ್ಲಿ ಹಿಂದು ಜಾಗರಣ ಮಂಚದ ಈ ಬೆದರಿಕೆಯ ಪರಿಣಾಮಗಳನ್ನು ಯೋಗಿ ಆದಿತ್ಯನಾಥ್‌ ಸರಕಾರ ಎಚ್ಚರಿಕೆಯಿಂದ ಅಧ್ಯಯನ ಮಾಡುತ್ತಿದೆ ಎಂದು ಸರಕಾರದಲ್ಲಿನ ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next