Advertisement

Big move! ಸಿಎಂ ಯೋಗಿಯಿಂದ ಪಾರದರ್ಶಕ ವರ್ಗಾವಣೆ, ಗುತ್ತಿಗೆ ನೀತಿ

11:48 AM Apr 18, 2017 | Team Udayavani |

ಲಕ್ನೋ :ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಇಂದು ಮಂಗಳವಾರ ತಮ್ಮ ಸಚಿವ ಸಂಪುಟದ ಮೂರನೇ ಸಭೆಯನ್ನು ಕರೆಯುವ ಸಾಧ್ಯತೆ ಇದೆ. ಲೋಕಭವನದಲ್ಲಿ ಈ ಮಹತ್ವದ ಸಭೆಯು ಸಂಜೆ ಐದು ಗಂಟೆಗೆ ನಡೆಯಲಿದೆ. 

Advertisement

ಈ ಮಹತ್ತರ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಅವರು ರಾಜ್ಯದಲ್ಲಿ ಹೊಸ ವರ್ಗಾವಣೆ ನೀತಿ ಹಾಗೂ ಕೆಲವೊಂದು ಪ್ರಮುಖ ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ನೂತನ ವರ್ಗಾವಣೆ ಹಾಗೂ ಸರಕಾರಿ ಗುತ್ತಿಗೆಗಳನ್ನು  ಮಂಜೂರು ಮಾಡುವ ನೀತಿಯು ಗರಿಷ್ಠ ಪಾರದರ್ಶಕತೆಯದ್ದಾಗಿರುತ್ತದೆ ಎಂದು ಗೊತ್ತಾಗಿದೆ. 

ಹೊಸ ವರ್ಗಾವಣೆ ನೀತಿಯ ಪ್ರಕಾರ ರಾಜ್ಯದ ವಿಭಾಗೀಯ ಅಧಿಕಾರಿಗಳ ಕರ್ತವ್ಯ ಅವಧಿಯು ಏಳು ವರ್ಷದ್ದಾಗಿರುತ್ತದೆ. ಜಿಲ್ಲಾಮಟ್ಟದ ಅಧಿಕಾರಿಗಳ ಅವಧಿಯು ಐದು ವರ್ಷದ್ದಾಗಿರುತ್ತದೆ. ಈ ಅವಧಿ ಪೂರೈಸದೇ ಅಧಿಕಾರಿಗಳಿಗೆ ಬೇರೆಡೆಗೆ ವರ್ಗಾಯಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರುವ ನಿರೀಕ್ಷೆ ಇದೆ. 

ಇದೇ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಅವರು ತಮ್ಮ ಸಂಪುಟ ಸಚಿವರು ತಮ್ಮ ತಮ್ಮ ಖಾತೆಯಲ್ಲಿ  ಈ ವರೆಗೆ ಮಾಡಿರುವ ಕೆಲಸ ಕಾರ್ಯಗಳ ವರದಿಯನ್ನು ಕೇಳಲಿದ್ದಾರೆ ಎಂದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next