Advertisement

ಆಶಿಶ್ ಮಿಶ್ರಾ ಮನೆಯನ್ನು ಏಕೆ ಕೆಡವುತ್ತಿಲ್ಲ: ಸಿಎಂ ಯೋಗಿಗೆ ಓವೈಸಿ ಪ್ರಶ್ನೆ

03:51 PM Jun 14, 2022 | Team Udayavani |

ನವದೆಹಲಿ : ಲಖೀಂಪುರ ಖೇರಿ ರೈತ ಪ್ರತಿಭಟನೆಯ ವೇಳೆ 5 ಜನರನ್ನು ಕೊಂದ ಆರೋಪ ಹೊತ್ತಿರುವ ಆಶಿಶ್ ಮಿಶ್ರಾ ಅವರ ಮನೆಯನ್ನು ಬಿಜೆಪಿ ಏಕೆ ಕೆಡವುತ್ತಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

Advertisement

ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ, ಉತ್ತರ ಪ್ರದೇಶ ಮುಖ್ಯಮಂತ್ರಿ ‘ಸೂಪರ್ ಚೀಫ್ ಜಸ್ಟಿಸ್’ ಆಗಿದ್ದಾರೆ. ಅವರು ತನ್ನ ನ್ಯಾಯಾಲಯದಲ್ಲಿ ಯಾರನ್ನಾದರೂ ಅಪರಾಧಿ ಎಂದು ನಿರ್ಣಯಿಸುತ್ತಾರೆ. ಅಫ್ರೀನ್ ಫಾತಿಮಾ ಅವರ ಮನೆ ಆಕೆಯ ತಾಯಿಯ ಹೆಸರಿನಲ್ಲಿದೆ ಎಂದು ಕಿಡಿ ಕಾರಿದ್ದಾರೆ.

ಮೋದಿ ಸರ್ಕಾರ ಕಳೆದ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು, ಬದಲಿಗೆ 2024 ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕಾಗಿ ಅವರು 5-5 ಲಕ್ಷ ಉದ್ಯೋಗಗಳನ್ನು ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ 55 ಲಕ್ಷ ಮಂಜೂರಾದ ಹುದ್ದೆಗಳನ್ನು ಹೊಂದಿತ್ತು ಆದರೆ ಕೇವಲ 10 ಲಕ್ಷ ಉದ್ಯೋಗಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತೀಯ ಮುಸ್ಲಿಮರಿಗೆ ಬಿಜೆಪಿ ಸಾಮೂಹಿಕ ಶಿಕ್ಷೆ ನೀಡುತ್ತಿದೆ ಎಐಎಂಐಎಂ ಮುಖ್ಯಸ್ಥ ಇದೆ ವೇಳೆ ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next