Advertisement

ಅಮರನಾಥ ಯಾತ್ರಿಕರ ಮೇಲೆ ಹರಿದ ಕಾರು, ಓರ್ವ ಸಾವು, ಮೂವರಿಗೆ ಗಾಯ

03:51 PM Jul 13, 2018 | Team Udayavani |

ಜಮ್ಮು : ಸಾಂಬಾ ಜಿಲ್ಲೆಯ ಜಮ್ಮು – ಲಖನ್‌ಪುರ ಹೈವೇಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಮರನಾಥ ಯಾತ್ರಿಕರ ಮೇಲೆ ಕಾರೊಂದು ಹರಿದ ಪರಿಣಾಮವಾಗಿ ಓರ್ವ ಯಾತ್ರಿಕ ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ವರದಿಯಾಗಿದೆ.

Advertisement

ಮೃತ ಯಾತ್ರಿಕನನ್ನು ಮುಕೇಂದ್ರ ಸಿಂಗ್‌ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಇಟಾ ಜಿಲ್ಲೆಯ ಯಾತ್ರಿಕರ ಗುಂಪೊಂದು ನಡೆದುಕೊಂಡು ಹೋಗುತ್ತಿದ್ದಾಗ ಬಾರಿ-ಬ್ರಹ್ಮಣ ಫ್ಲೈಓವರ್‌ ಸಮೀಪ ಭುವಿನ್‌ ದುಬೆ ಎಂಬ ವ್ಯಕ್ತಿ ಚಲಾಯಿಸಿಕೊಂಡು ಬಂದ ಕಾರು ಪಾದಚಾರಿಗಳ ಮೇಲೆ ಹರಿಯಿತು. 

ಮೂವರು ಗಾಯಾಳುಗಳ ಪೈಕಿ ಚಂದರ್‌ ಪಾಲ್‌ ಎಂಬ ವ್ಯಕ್ತಿಯ ಸ್ಥಿತಿ ಗಂಭೀರವಿದೆ. ವೀರಿ ಸಿಂಗ್‌ ಮತ್ತು ರಾಮ್‌ ಪೌಲ್‌ ಎಂಬವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಅವಘಡ ನಡೆದ ವೇಳೆ ಭಾರೀ ಮಳೆ ಸುರಿಯುತ್ತಿತ್ತು. ಕಾರು ಚಾಲಕನಾಗಿರುವ ಸ್ಥಳೀಯ ವ್ಯಕ್ತಿ ದುಬೆಯನ್ನು ಪೊಲೀಸರು ಬಂಧಿಸಿದ್ದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next