Advertisement
ಉರ್ವ ಮಾರ್ಕೆಟ್ ಕಡೆಯಿಂದ ಸುಲ್ತಾನ್ ಬತ್ತೇರಿ ಕಡೆಗೆ ಸಾಗುವ ದಾರಿಯಲ್ಲಿ ಪಾಲಿಕೆ ವತಿಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಈ ಭಾಗದ ಜನರು ಸಂಕಷ್ಟ ಎದುರಿಸಬೇಕಾದ ದಿನ ಸನ್ನಿಹಿತವಾಗುತ್ತಿದೆ. ಪ್ರಸ್ತುತ ಇಲ್ಲಿ ಚರಂಡಿ ನೀರು ಸಮೀಪದ ತೋಡಿಗೆ ಹೋಗುತ್ತಿದ್ದು, ಮಳೆ ಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಇಲ್ಲಿನ ಒಳಚರಂಡಿ ವ್ಯವಸ್ಥೆ ಸರಿಯಿಲ್ಲ ಎಂಬುದಾಗಿ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈಗಾಗಲೇ ಅಲ್ಲಿದ್ದ ಮಳೆ ನೀರು ಹರಿಯುವ ಚರಂಡಿಗೆ ಅಡ್ಡಲಾಗಿ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯಲಿದೆ ಎಂಬುದು ಜನರ ಅಳಲು.
Related Articles
ಈಗ ರಜಾ ಸಮಯವಾಗಿರುವುದರಿಂದ ಸುಲ್ತಾನ್ ಬತ್ತೇರಿ ಸಮುದ್ರ ಕಿನಾರೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಆದರೆ ಸುಲ್ತಾನ್ ಬತ್ತೇರಿ ಸಮುದ್ರಕ್ಕೆ ತೆರಳಲು ಇರುವ ಹತ್ತಿರದ ಮಾರ್ಗವಾದ ಈ ಜಾಗದಲ್ಲಿ ವಾರಗಳಿಂದ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದ ವಾಹನಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆ ಭಾಗಕ್ಕೆ ಹೋಗುವ ಜನರು ಸುತ್ತು ಬಳಸಿ ದೂರದ ದಾರಿಯಾಗಿ ಸಾಗಬೇಕಾಗಿದೆ.
Advertisement
ಸೂಕ್ತ ವ್ಯವಸ್ಥೆ ಕಲ್ಪಿಸಿಚರಂಡಿ ನೀರು ಹರಿಯಲು ಒಳಚರಂಡಿ ಕಾಮಗಾರಿ ನಡೆಯುತ್ತಿರುವುದು ಸಂತಸದ ವಿಚಾರ. ಆದರೆ ಕಾಮಗಾರಿಯನ್ನು ಚರಂಡಿ ನೀರು ಹರಿಯದಂತೆ ಅಡ್ಡಲಾಗಿ ಮಾಡುತ್ತಿರುವುದು ಸರಿಯಲ್ಲ. ಮಳೆಗಾಲದಲ್ಲಿ ಈ ರಸ್ತೆಗಳು ಮುಳುಗಡೆಯಾಗುವುದು ಖಚಿತ. ಆ ಬಗ್ಗೆ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ.
– ರಾಧಾಕೃಷ್ಣ,
ಸ್ಥಳೀಯರು ಪರ್ಯಾಯ ವ್ಯವಸ್ಥೆ
ಚರಂಡಿ ನೀರು ಹರಿಯಲು ಇರುವ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು. ಒಳಚರಂಡಿ ಕಾಮಗಾರಿ ಮುಕ್ತಾಯದ ವೇಳೆ ಈ ಸಮಸ್ಯೆ ಪರಿಹಾರವಾಗಲಿದೆ.
– ರಘುಪಾಲ್,
ಎಂಜಿನಿಯರ್ ಪ್ರಜ್ಞಾ ಶೆಟ್ಟಿ