Advertisement

ದುರಸ್ತಿಯಾಗದ ನೀರಿನ ಪೈಪ್‌ಲೈನ್‌

09:45 PM Jul 10, 2019 | Sriram |

ಮಹಾನಗರ: ರವಿವಾರ ರಾತ್ರಿ ತುಂಬೆಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯು ಕಣ್ಣೂರಿನಲ್ಲಿ ಸೋರಿಕೆಯಾಗಿದ್ದು, ಇದರ ದುರಸ್ತಿ ಕಾಮಗಾರಿಗೆ ಬುಧವಾರವೂ ಮಳೆ ಅಡ್ಡಿಯಾಗಿದೆ.

Advertisement

ಬುಧವಾರ ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ಅಡ ಚಣೆಯಾಗಿದೆ. ಪೈಪ್‌ ದುರಸ್ತಿಗಾಗಿ ತೋಡಿರುವ ಗುಂಡಿಯಲ್ಲಿ ನೀರು ತಂಬುತ್ತಿದೆ. ಈ ಹಿನ್ನೆಲೆ ಯಲ್ಲಿ ಬುಧವಾರವೂ ನಗರದ ಹಲವು ಭಾಗಗಳಿಗೆ ನೀರು ಸರಬರಾಜು ಸ್ಥಗಿತವಾಗಿದೆ.

ಎರಡು ದಿನಗಳಿಂದ ಒಡೆದಿರುವ ಪೈಪ್‌ನ ಒಳಗಿರುವ ನೀರನ್ನು ಪಂಪ್‌ ಬಳಸಿ ತೆಗೆಯಲಾಯಿತು. ಪ್ರಸ್ತುತ ಮಳೆಯಿಂದಾಗಿ ನೀರಿನ ಒಸರು ಗುಂಡಿಯಲ್ಲಿ ತುಂಬುತ್ತಿದೆ. ಮೂರು ಪಂಪ್‌ ಬಳಸಿ ನೀರು ತೆರವುಗೊಳಿಸಲಾಗುತ್ತಿದೆ. ಮಳೆ ಕಡಿಮೆಯಾದರೆ ಗುರುವಾರ ಸಂಜೆಯೊಳಗೆ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ರಾತ್ರಿಯಿಂದ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಕೆಲವು ಭಾಗಗಳಿಗೆ ಪಾಲಿಕೆಯಲ್ಲಿರುವ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next