Advertisement

ಉನ್ನಾವ್‌ ಪ್ರಕರಣಗಳ ವರ್ಗ: ಆದೇಶ ಮಾರ್ಪಡಿಸಿದ ಸುಪ್ರೀಂ

02:25 AM Aug 03, 2019 | mahesh |

ಹೊಸದಿಲ್ಲಿ: ಉನ್ನಾವ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿ ಸಿದ ಎಲ್ಲ 5 ಕೇಸುಗಳನ್ನೂ ಉತ್ತರಪ್ರದೇಶದಿಂದ ದಿಲ್ಲಿಯ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಗುರುವಾರ ನೀಡಿದ್ದ ಆದೇಶವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಮಾರ್ಪಾಡು ಮಾಡಿದೆ.

Advertisement

ಸಿಬಿಐ ಕೋರಿಕೆಯ ಮೇರೆಗೆ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣವನ್ನು ದಿಲ್ಲಿ ನ್ಯಾಯಾಲಯಕ್ಕೆ ಸದ್ಯಕ್ಕೆ ವರ್ಗಾಯಿಸದೇ ಇರಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದ್ದು, 7 ದಿನಗಳೊಳಗಾಗಿ ಪೂರ್ಣಗೊಳಿಸುವಂತೆ ನ್ಯಾಯಾಲಯವೇ ಸೂಚಿಸಿರುವ ಕಾರಣ, ಈಗ ಪ್ರಕರಣವನ್ನು ಬೇರೆಡೆಗೆ ವರ್ಗಾಯಿಸಿದರೆ ತನಿಖೆಗೆ ಅಡ್ಡಿ ಯಾಗುತ್ತದೆ ಎಂದು ಸಿಬಿಐ ಕೋರಿಕೊಂಡ ಹಿನ್ನೆಲೆಯಲ್ಲಿ ಸಿಜೆಐ ನೇತೃತ್ವದ ನ್ಯಾಯಪೀಠ ಈ ನಿರ್ಧಾರ ಕೈಗೊಂಡಿತು.

ಇದೇ ವೇಳೆ, ಅಪಘಾತ ಪ್ರಕರಣದ ತನಿಖೆಗಾಗಿ 20 ಮಂದಿ ಹೆಚ್ಚುವರಿ ಅಧಿಕಾರಿಗಳಿರುವ ವಿಶೇಷ ತಂಡವನ್ನು ಶುಕ್ರವಾರ ಸಿಬಿಐ ರಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next