Advertisement
ಹುಬ್ಬಳ್ಳಿ: ಜಿಲ್ಲೆಯಲ್ಲಿನ ಕಟ್ಟುನಿಟ್ಟಿನ ಕರ್ಫ್ಯೂ ಪರಿಣಾಮ ನವಲೂರು ಗೂಡ್ಶೆಡ್ನಲ್ಲಿ ಹಮಾಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬರುತ್ತಿದ್ದ ಕಾರ್ಮಿಕರು ನಗರದಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಸರಕು ಸಾಗಣೆ ರೈಲುಗಳ ಮೂಲಕ ನಗರಕ್ಕೆ ಬರುವ ಅಗತ್ಯ ವಸ್ತುಗಳ ಅನ್ಲೋಡ್ ವಿಳಂಬವಾಗುತ್ತಿದೆ.
Related Articles
Advertisement
ಪ್ರಸ್ತಾಪಿಸಿದರೂ ಪ್ರಯೋಜನವಿಲ್ಲ: ರಸಗೊಬ್ಬರ ಅನ್ಲೋಡ್, ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಹಾಗೂ ಜಿಲ್ಲೆಯ ಜನಪ್ರತಿನಿ ಧಿಗಳ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಗ್ರಾಮಗಳಿಂದ ಬರುವ ಕಾರ್ಮಿಕರಿಗೆ ಚೆಕ್ಪೋಸ್ಟ್ಗಳಲ್ಲಿ ತಡೆಯಲಾಗುತ್ತಿದೆ. ಅವರ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದ ಪರಿಣಾಮ ಬಿಡುತ್ತಿಲ್ಲ. ಇದಕ್ಕಾಗಿ ವಾಹನ ವ್ಯವಸ್ಥೆ ಮಾಡಿದರೆ ಅವುಗಳಿಗೆ ಪಾಸ್ ಇಲ್ಲ ಎಂದು ದಂಡ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಕಾರ್ಮಿಕರು, ಲಾರಿ ಚಾಲಕರು ಬರಲು ಸಾಧ್ಯವಾಗುತ್ತಿಲ್ಲ ಎಂದು ನವಲೂರು ಗೂಡ್ಶೆಡ್ ಗ್ರಾಹಕರ ಹಾಗೂ ಗುತ್ತಿಗೆದಾರರ ಅಸೋಸಿಯೇಶನ್ ಕಾರ್ಯದರ್ಶಿ ನಿಜಗುಣಿ ಬೇವೂರು ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದರು. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಅವರು.
ಹೆಚ್ಚುವರಿ ಹೊರೆ: ಸದ್ಯ ಇರುವ ಕಾರ್ಮಿಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಬಿಹಾರಿ ಮೂಲದ ಕಾರ್ಮಿಕರಿಗೆ ಶೆಡ್, ಊಟ, ನೀರು, ಸಕಾಲಕ್ಕೆ ವಿವಿಧ ಸೌಲಭ್ಯಗಳನ್ನು ನೀಡಿ ಉಳಿಸಿಕೊಳ್ಳಲಾಗಿದೆ. ಅಸೋಸಿಯೇಶನ್ ಗೆ ಇದೊಂದು ಹೊರೆಯಾಗಿದೆ. ಇನ್ನೂ ಕಾರ್ಮಿಕರ ಸಮಸ್ಯೆಯಿಂದ ಸಕಾಲಕ್ಕೆ ಅನ್ ಲೋಡ್ ಮಾಡದ ಕಾರಣಕ್ಕೆ ಡೆಮ್ರೇಜ್ ಹಾಗೂ ವಾರ್ಪೇಜ್ ಶುಲ್ಕವನ್ನು ರೈಲ್ವೆ ಇಲಾಖೆ ವಿಧಿಸುತ್ತಿದೆ. ವಿಳಂಬವಾಗುವ ಪ್ರತಿ ಗಂಟೆಗೆ 6 ಸಾವಿರ ರೂ. ವಿಧಿ ಸಲಾಗುತ್ತಿದೆ. ಇದರಿಂದ ನಿತ್ಯ 25-30 ಸಾವಿರ ರೂ. ದಂಡ ಪಾವತಿ ಮಾಡುವಂತಾಗಿದೆ. ಹಿಂದಿನ ವರ್ಷ ಕೋವಿಡ್ ಕಾರಣದಿಂದ ಡೆಮ್ರೇಜ್ ಹಾಗೂ ವಾಪೇìಜ್ ಶುಲ್ಕ ಇರಲಿಲ್ಲ. ಆದರೆ ಎರಡನೇ ಅಲೆಯ ತೀವ್ರತೆಯಿಂದ ಕೂಡಿದ್ದರೂ ವಿನಾಯಿತಿ ನೀಡುತ್ತಿಲ್ಲ. ಲಾಕ್ಡೌನ್ ಪೂರ್ಣಗೊಳ್ಳುವವರೆಗೆ ಡೆಮ್ರೇಜ್ ಹಾಗೂ ವಾಪೇìಜ್ ಶುಲ್ಕ ವಿನಾಯಿತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಕೃಷಿ ಇಲಾಖೆಯಿಂದ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಕುರಿತು ರೈಲ್ವೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಅಗತ್ಯ ವಸ್ತುಗಳ ಪೂರೈಕೆ, ಕಾರ್ಮಿಕರ ಓಡಾಟಕ್ಕೆ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಅಸೋಸಿಯೇಶನ್ ಅಳಲಾಗಿದೆ.