Advertisement

Udupi: ನಿಯಮ ಮೀರಿ ಕಾರ್ಯಾಚರಣೆ: ಪರವಾನಿಗೆ ರದ್ದತಿಗೆ ಸೂಚನೆ

01:27 AM Oct 26, 2024 | Team Udayavani |

ಉಡುಪಿ: ಮಣಿಪಾಲದಲ್ಲಿ ನಿಯಮಾವಳಿ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಎರಡು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಪರವಾನಿಗೆ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ.

Advertisement

ಮಣಿಪಾಲದ ಅಂಬಾಗಿಲು ರಸ್ತೆಯಲ್ಲಿರುವ ಬಾರ್‌ ಹಾಗೂ ಪರ್ಕಳ ರಸ್ತೆಯಲ್ಲಿರುವ ಪಬ್‌ ಪರವಾನಿಗೆ ರದ್ದುಪಡಿಸಲು ಸೂಚನೆ ನೀಡಿದ್ದಾರೆ.

ಈ ಎರಡೂ ಬಾರ್‌ ಅಲ್ಲದೆ ಇನ್ನೂ ಹಲವು ಬಾರ್‌ಗಳಲ್ಲಿ ನಿಯಮ ಮೀರಿ ತಡರಾತ್ರಿಯವರೆಗೂ ಪಬ್‌ಗಳನ್ನು ತೆರೆದಿಡುತ್ತಿರುವುದಲ್ಲದೇ, ಪಬ್‌ನಲ್ಲಿ ಪಾರ್ಟಿ, ಫ್ಯಾಶನ್‌ ಶೋ, ಡ್ಯಾನ್ಸ್‌ ಪಾರ್ಟಿ ಮನೋರಂಜನ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ಹಲವು ಬಾರಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next