Advertisement

ಭಾರತ ಬಾಂಧವ್ಯ ಸುಧಾರಿಸಲು ಅಮೆರಿಕ ಉ.ಪ್ರ. ಕಡೆಗಣಿಸುವಂತಿಲ್ಲ: ನಿಯೋಗ

11:24 AM May 04, 2018 | Team Udayavani |

ವಾಷಿಂಗ್ಟನ್‌ : ಅಮೆರಿಕಕ್ಕೆ ಭಾರತದೊಂದಿಗಿನ ಬಾಂಧವ್ಯವನ್ನು ಸುಧಾರಿಸಬೇಕು ಎಂದಿದ್ದರೆ ಅದು ಉತ್ತರ ಪ್ರದೇಶವನ್ನು ಕಡೆಗಣಿಸುವಂತಿಲ್ಲ ಎಂದು ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥ ನಾಥ್‌ ಸಿಂಗ್‌ ನೇತೃತ್ವದಲ್ಲಿ ಇಲ್ಲಿಗೆ ಭೇಟಿ ನೀಡಿರುವ ಬಿಜೆಪಿ ನಿಯೋಗವು ಹೇಳಿದೆ. 

Advertisement

ಸಚಿವ ಸಿದ್ಧಾರ್ಥ ನಾಥ್‌ ಸಿಂಗ್‌ ವರು ಉನ್ನತಾಧಿಕಾರದ ಬಿಜೆಪಿ ನಿಯೋಗವನ್ನು ಅಮೆರಿಕಕ್ಕೆ ತಂದಿದ್ದಾರೆ ಮತು ಅಮೆರಿಕದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಉತ್ತರ ಪ್ರದೇಶದ ಭಾರತ ಅತ್ಯಂತ ಗರಿಷ್ಠ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಭಾರತದೊಂಗಿನ ಬಾಂಧವ್ಯವನ್ನು ಸುಧಾರಿಸಬೇಕು ಎಂದಿದ್ದರೆ ಅಮೆರಿಕ ಉತ್ತರ ಪ್ರದೇಶದಂತಹ ರಾಜ್ಯಗಳನ್ನು ಕಡೆಗಣಿಸುವಂತಿಲ್ಲ ಎಂದು ಸಿದ್ಧಾರ್ಥ ನಾಥ್‌ ಸಿಂಗ್‌ ಹೇಳಿದರು. 

ಭಾರತದ ಆರೋಗ್ಯ ಸೂಚ್ಯಂಕ ಸುಧಾರಿಸಬೇಕು ಎಂದು ನೀವು ಬಯಸುವಿರಾದರೆ ಉತ್ತರ ಪ್ರದೇಶದಲ್ಲಿ ಸ್ವಾಸ್ಥ್ಯ ಮಟ್ಟವನ್ನು ಸುಧಾರಿಸುವುದು ಅತೀ ಅಗತ್ಯ. ಅದು ಸುಧಾರಿಸದಿದ್ದರೆ ಭಾರತದ ಆರೋಗ್ಯ ಸೂಚ್ಯಂಕ ಸುಧಾರಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸಿದ್ಧಾರ್ಥ ನಾಥ್‌ ಸಿಂಗ್‌ ಹೇಳಿದರು. 

ಸಿದ್ಧಾರ್ಥ್ ನಾಥ್‌ ಸಿಂಗ್‌ ಅವರ ನಿಯೋಗ ಕ್ಯಾಲಿಫೋರ್ನಿಯದಲ್ಲಿನ ಸಿಲಿಕಾನ್‌ ವ್ಯಾಲಿಗೆ ಭೇಟಿ ನೀಡುವ ತನ್ನ ಅಮೆರಿಕ ಭೇಟಿಯನ್ನು ಮುಗಿಸಿದೆ. ನಿನ್ನೆ ಗುರುವಾರ ಅವರ ನಿಯೋಗವು ವಾಷಿಂಗ್ಟನ್‌ ಡಿಸಿಯಲ್ಲಿತ್ತು ಮತ್ತು ಅಮೆರಿಕ ಸರಕಾರದ ಅನೇಕ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು. 

Advertisement

ಅಮೆರಿಕದ ವಾಣಿಜ್ಯ ಇಲಾಖೆ ಮತ್ತು ಯುಎಸ್‌ಎಐಡಿ ಹಿರಿಯ ಅಧಿಕಾರಿಗಳನ್ನು ಕೂಡ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next