Advertisement

“ಐಕ್ಯರಂಗ ಅಭ್ಯರ್ಥಿ ಗೆಲುವು ಖಚಿತ’

10:41 AM Oct 21, 2019 | sudhir |

ಪೆರ್ಲ: ಮಂಜೇಶ್ವರ ವಿಧಾನ ಸಭಾ ಉಪಚುನಾವಣೆ ಯುಡಿಎಫ್‌ ಅಭ್ಯರ್ಥಿ ಎಂ.ಸಿ. ಕಮರುದ್ದೀನ್‌ ಅವರ ಪರವಾಗಿ ಬೃಹತ್‌ ಸಾರ್ವಜನಿಕ ಬಹಿರಂಗ ಸಭೆಯು ಎಣ್ಮಕಜೆ ಪೆರ್ಲದಲ್ಲಿ ಅ.18ರಂದು ಜರಗಿತು.

Advertisement

ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡುತ್ತಾ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ,ಜಾತ್ಯಾತೀತ ಸಂರಕ್ಷಣೆಗಾಗಿ ಯುಡಿಎಫ್‌ ಅಭ್ಯ ರ್ಥಿಯ ಗೆಲುವು ಅನಿವಾರ್ಯ.ಬಹು ಭಾಷಾ ಸಂಗಮಭೂಮಿಯಲ್ಲಿ ಎಲ್ಲರ ಹಿತ ರಕ್ಷಣೆಗಾಗಿ ಅಭ್ಯರ್ಥಿ ಎಂಸಿ.ಕಮರುದ್ದೀನ್‌ ಅವರನ್ನು ಬಹುಮತದಿಂದ ಆರಿಸುವಂತೆ ಮತದಾರರಿಗೆ ಕರೆ ನೀಡಿದರು.

ಎಣ್ಮಕಜೆ ಪಂ.ಚುನಾವಣೆ ಸಮಿತಿ ಚೆಯರ್‌ವೆುàನ್‌ ಬಿಎಸ್‌. ಗಾಂಭೀರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಐಕ್ಯರಂಗ ನೇತಾರರಾದ ಶಾಸಕ ಯುಟಿ ಖಾದರ್‌, ಮಾಜಿ ಶಾಸಕ ರಮಾನಾಥ ರೈ., ಶಕುಂತಲಾ ಶೆಟ್ಟಿ ,ಪ್ರಮೋದ್‌ ಮಧ್ವರಾಜ್‌, ವಿನಯ ಕುಮಾರ್‌ ಸೊರಕೆ, ವಿ.ಪ. ಸದಸ್ಯ ಐವನ್‌ ಡಿ. ಸೋಜಾ, ಮಿಥುನ್‌ ರೈ., ಲೋಕಸಭಾ ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ರಾಜ್ಯ ನೇತಾರರಾದ ಕುಂಞಾಲಿ ಕುಟ್ಟಿ, ಮಜೀದ್‌, ಡಾ| ಮುನೀರ್‌, ಸುರೇಂದ್ರನ್‌, ಮಂಞಲಂಕುಳಿ ಅಲಿ, ಎಣ್ಮಕಜೆ ಯುಡಿಎಫ್‌ ನಾಯಕ ರಾದ ಸೋಮಶೇಖರ್‌,ಶಾರದಾ ವೈ. ಇತರ ನೇತಾರರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next