Advertisement
ಈ ಸಂಕಲನದೊಂದಿಗೆ, ಮುಖ್ಯವಾಗಿ ಈ ಕವನದೊಂದಿಗೆ, ನನಗೆ ವೈಯಕ್ತಿಕವಾಗಿ ಒಂದು ಸಂಬಂಧ ಇದೆ; ಸಂಕಲನಕ್ಕೆ ಮೌಲಿಕವಾದ ಮುನ್ನುಡಿ ಬರೆದವರು ಶಾಂತಿನಾಥ ದೇಸಾಯಿಯವರಾದರೆ, ಬೆನ್ನುಡಿ ಬರೆದವನು ನಾನು. ದೇಸಾಯಿಯವರು ತಮ್ಮ ಮುನ್ನುಡಿಯಲ್ಲಿ, ಇತರ ವಿಷಯಗಳೊಂದಿಗೆ, ಅಮ್ಮನ ಗುಡ್ಡ ಕವನದ ಪ್ರಶಂಸೆಗೂ ತಕ್ಕ ಜಾಗ ಕೊಟ್ಟಿ¨ªಾರೆ; ಈ ಕವನ ಸಂಕಲನದಲ್ಲಿನ ಅತ್ಯಂತ ಶ್ರೇಷ್ಠ ಕವನವೆಂದರೆ ಅಮ್ಮನ ಗುಡ್ಡ. ಬಾಲ್ಯದ ಭಯ-ದಿಗಿಲುಗಳ ಮುಗ್ಧ ಪ್ರಪಂಚ ಹಾಗೂ ಬೆಳೆದ ಬುದ್ಧಿಜನ್ಯ ಅನುಭವ ಪ್ರಪಂಚ ಇವುಗಳನ್ನು ಜೊತೆ ಜೊತೆಯಾಗಿ ಇರಿಸಿ, ಮನುಷ್ಯನ ಹಾಗೂ ನಾಗರಿಕತೆಯ ಬೆಳೆಯುವ ಪ್ರಕ್ರಿಯೆಯಲ್ಲಿ ಅನುಭವದ ಒಂದು ರಮ್ಯ ಆಯಾಮ ಕಳೆದುಹೋಗುತ್ತದೆ ಎಂಬ ಸತ್ಯವನ್ನು ಅತ್ಯಂತ ಮೂರ್ತವಾಗಿ, ದಟ್ಟವಾಗಿ, ಕಥಾರೂಪದ ಈ ಕವನದಲ್ಲಿ ಕವಿ ಬಿಚ್ಚಿಡುತ್ತಾಳೆ ಎನ್ನುತ್ತಾರೆ ಶಾಂತಿನಾಥ ದೇಸಾಯಿ. ನಾನು ನನ್ನ ಬೆನ್ನುಡಿಯಲ್ಲಿ ಸಹಾ ಈ ಕವನದ ವೈಶಿಷ್ಟ್ಯದ ಬಗ್ಗೆ ಮಾತಾಡಿದ್ದೇನೆ. ಒಂದು ಜನಕೂಟದ ಸಂಸ್ಕƒತಿಯ ಹಿನ್ನೆಲೆಯಲ್ಲಿ ಪಟ್ಟ ಅನುಭವಗಳನ್ನು ಪಡಿಮೂಡಿಸುವ…
Related Articles
Advertisement
ಕವಿತೆಯ ಎರಡನೆಯ ಭಾಗದಲ್ಲಿ ಮತ್ತೆ ಕವಿ ಅಮ್ಮನ ಗುಡ್ಡಕ್ಕೆ ಬರುವ ಅನುಭವದ ಒಂದು ಚಿತ್ರಣವಿದೆ; ಆದರೆ ಈಗ ಹಲವಾರು ವರ್ಷಗಳು ಕಳೆದಿವೆ, ಊರು ಬಿಟ್ಟು ಶಹರ ಸೇರಿದ ಕವಿಗೆ ಊರ ಜೊತೆ ಅಸಂಬಂಧವೊಂದು ಹುಟ್ಟಿಕೊಂಡಿದೆ. ಅಮ್ಮನ ಗುಡ್ಡವೂ ಈಗ ಮೊದಲಿನಂತಿಲ್ಲ: ಅಲ್ಲಿಗೆ ಹೋಗಲು ಶ್ರಮವಿಲ್ಲ, ರಸ್ತೆಯಾಗಿದೆ, ವಿದ್ಯುತ್ಛಕ್ತಿಯ ಬೆಳಕು ಜಗಜಗಿಸುತ್ತಿದೆ, ಗುಡಿಯಿರುವಲ್ಲಿ ದೇವಸ್ಥಾನ ಎದ್ದಿದೆ, ಕುಕ್ಕಡದಮ್ಮ ಹುತ್ತದಲ್ಲಿ ತಲೆಮರೆಸಿಲ್ಲ, ಹೊರಬಂದಿ¨ªಾಳೆ, ಅವಳ ಮುಖಕ್ಕೊಂದು ಮುಖವಾಡ ಬಂದಿದೆ; ಇತರ ಕೆಳವರ್ಗದ ದೇವತೆಗಳೂ ಅಕ್ಕಪಕ್ಕದಲ್ಲಿ ಇ¨ªಾವೆ. ಒಟ್ಟಾರೆಯಾಗಿ, ಹಿಂದೆ ನಿಗೂಢವೂ ಅದ್ಭುತರಮ್ಯವೂ, ಪವಿತ್ರ ಯಾತ್ರಾಸ್ಥಳವೂ ಆಗಿದ್ದ ತಾಣ ಈಗ ವಾಣಿಜ್ಯೀಕರಣಗೊಂಡಿದೆ. ಈ ಪರಿವರ್ತನೆಯೂ ನಮಗೆ ಹೊಸತೇನೂ ಅಲ್ಲ; ನಮಗೆ ಗೊತ್ತಿಲ್ಲದೇನನ್ನೂ ಕವಿ ನಮಗೆ ತೋರಿಸಹೊರಟಿಲ್ಲ. ನಮಗೆ ಗೊತ್ತಿರುವುದನ್ನೇ ತಮ್ಮ ಅನನ್ಯ ಅನುಭವ ನಿರೂಪಣೆಯೆಂಬಂತೆ ತೋರಿಸುತ್ತಿ¨ªಾರೆ.ಈ ಹಿಂದೆಯೇ ಹೇಳಿದಂತೆ ಇದು ವಸ್ತುವಿವರಗಳ ಶೈಲಿ; ಶಾಂತಿನಾಥ ದೇಸಾಯಿಯವರು ಇದನ್ನು ವಸ್ತುಧ್ವನಿ ಎನ್ನುತ್ತಾರೆ. ಉದಾಹರಣೆಗೆ, ಕವಿತೆಯ ಆರಂಭವೇ ಇಂತಿದೆ: ವರ್ಷಕ್ಕೊಮ್ಮೆಯಾದರೂ ಮನೆದೇವತೆಯ ದರ್ಶನ.
ಪಯಣ ಎತ್ತಿನ ಬಂಡಿಯಲ್ಲಿ ರೊಟ್ಟಿ ಬುತ್ತಿ ಕಟ್ಟಿಕೊಂಡು.
ಚನ್ನಗಿರಿಯಿಂದ ಮೂರುತಾಸಿನ ಹಾದಿ ಜೋಳದಾಳು
ಕಾಡು; ಬಿದಿರು ಮೆಳೆ ತುಂಬಿದ ಕಾಡ ಸೀಮೆ; ಅಡಿ
ಇಟ್ಟಲೆಲ್ಲ ಆಳೆತ್ತರದ ಹುತ್ತ; ನಡುವೆ ಗುಡ್ಡ;
ನೆತ್ತಿಗೊಂದು ಗುಡಿ; ಒಳಗೊಂದು ಹುತ್ತ; ಗುಡ್ಡಕ್ಕೆ
ಗುಡ್ಡವೇ ಉಸಿರೆಳೆಯುವಂತೆ ಗಾಳಿ ಸುಯ್ನಾಟ;
ನಿಂತು ಲಂಗೋಟಿಯಗಲದಲ್ಲಿ ನಭಕ್ಕೆ ಹುಯ್ಯಲಿಡುವ
ಗಾಳಿಮರ. ಇಂಥ ವಿವರಗಳಲ್ಲಿ ಕೆಲವೊಂದು ನಮ್ಮನ್ನು ಪ್ರತ್ಯೇಕ ಗಮನಕ್ಕೆ ಒತ್ತಾಯಿಸುತ್ತವೆ: ದೇವತೆಗೆ ಮುಖವಾಡ ಬಂದಿರುವುದು ಒಂದು. ಇದರ ಅರ್ಥ ನಮಗೆ ಬಿಟ್ಟದ್ದು. ಕವಿತೆಯನ್ನು ಇಡಿಯಾಗಿ ಓದಿಯಾದ ಮೇಲೆ ನಮ್ಮ ಮನಸ್ಸಿನಲ್ಲಿ ಉಳಿಯುವ ಇನ್ನೊಂದು ಸಮಾನಾಂತರದ ವಿವರವಿದೆ: ಕವಿ ಬಾಲಕಿಯಾಗಿ¨ªಾಗಿನ ಯಾತ್ರೆಗಳಲ್ಲಿ ಆಕೆ ಊರಿಗೆ ಮರಳುವಾಗ ಲಂಗ ಹರಿದಿರುತ್ತದೆ; ಆದರೆ ನಂತರದ ಅನುಭವದಲ್ಲಿ ಉಟ್ಟ ಸೀರೆ ಸುಕ್ಕಾಗಿರುವುದಿಲ್ಲ, ನಿರಿಗೆ ಕೂಡ ಹಾಗೆಯೇ ಇರುತ್ತದೆ! ಈ ರೂಪಕದೊಂದಿಗೆ ಕವಿತೆಗೆ ಬಹು ದೊಡ್ಡದಾದೊಂದು ಅರ್ಥವ್ಯಾಪ್ತಿ ಬರುತ್ತದೆ. ಕವಿ ಅದನ್ನು ವಿವರಿಸುವುದಕ್ಕೆ ಹೋಗುವುದಿಲ್ಲ, ನಮ್ಮ ಕಲ್ಪನೆಗೆ ಬಿಡುತ್ತಾರೆ. ಅಮ್ಮನ ಗುಡ್ಡದ ನಂತರ ಸರ್ವಮಂಗಳ ಯಾವ ಕವನ ಸಂಕಲನವನ್ನೂ ಪ್ರಕಟಿಸಲಿಲ್ಲ; ಅವರ ಬಿಡಿ ಕವಿತೆಗಳೂ ಎಲ್ಲೂ ಕಾಣಿಸುತ್ತಿಲ್ಲ. ಯಾಕೆ ಈ ಕವಿತಾ ಸನ್ಯಾಸ? ಬಹುಶಃ ಇದಕ್ಕೆ ಉತ್ತರ ಅವರ ವಸ್ತುಧ್ವನಿಯ ಮೂಲದÇÉೇ ಇದೆಯೆಂದು ಕಾಣುತ್ತದೆ. ವಾಸ್ತವಿಕ ಲೋಕದಲ್ಲಿ ಅವರು ಎಷ್ಟು ತೊಡಗಿಸಿಕೊಂಡವರೆಂದರೆ ಅದಕ್ಕೊಂದು ಕಲ್ಪನೆಯ ಮೆರುಗು ಅವರಿಗೆ ಕೃತಕವಾಗಿ ಕಾಣಿಸುತ್ತಿರಬಹುದು. ಇದೇ ಸಂಕಲನದ ನಾನು ನಾನೇ ಎಂಬ ಆರಂಭದ ಕವಿತೆ ಕೂಡ ಇಲ್ಲಿ ಪ್ರಸ್ತುತ; ಉನ್ನತ ಆದರ್ಶಗಳನ್ನು ತಿರಸ್ಕರಿಸುತ್ತ ಅವರನ್ನುವುದು; ಅಯ್ನಾ ನನಗೆ ಬೇಕು:
ಕ್ಷಣ ತಿಕ್ಕಾಟದಲ್ಲಿ ಹೇಸಿಗೆ ನಡುವೆ
ಹುಟ್ಟಿ ಅಲ್ಲಿಯೇ ಇನ್ನೂ ಗಿರಗಿಟ್ಲೆ
ಆಡುತ್ತಿರುವ ನನ್ನ ನಾನೇ ಅರಿವುದಯ್ನಾ – ಕೆ. ವಿ. ತಿರುಮಲೇಶ್