Advertisement

Gundlupet;ಮಲ್ಲಯ್ಯನಪುರ ಅನ್ಗಲ್ ಗುಡ್ಡಕ್ಕೆ ಬೆಂಕಿ: 50 ರಿಂದ 60 ಎಕರೆ ಭಸ್ಮ

08:41 PM Apr 01, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಅನ್ಗಲ್ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಸುಮಾರು 50ರಿಂದ 60 ಎಕರೆ ಬೆಂಕಿಗೆ ಆಹುತಿಯಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

Advertisement

ಕಂದಾಯ ಭೂಮಿಗೆ ಒಳಪಡುವ ಮಲ್ಲಯ್ಯನಪುರ ಅನ್ಗಲ್ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಹಿನ್ನೆಲೆ ಒಣಗಿ ನಿಂತಿದ್ದ ಕುರುಚಲು ಗಿಡ ಮರಗಳು, ಪೊದೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಗುಡ್ಡದ ಮೇಲ್ಭಾಗಕ್ಕೆ ಹತ್ತಿಕೊಂಡ ಬೆಂಕಿ ಸುತ್ತಲ ಪ್ರದೇಶವನ್ನು ಆವರಿಸಿ, ಕೆಳ ಭಾಗದವರೆಗಿನ 50-60 ಎಕರೆ ಸುಟ್ಟು ಭಸ್ಮವಾಗಿದೆ.

ಗುಡ್ಡಕ್ಕೆ ಬೆಂಕಿ ಬಿದ್ದ ಮಾಹಿತಿ ಅರಿತ ಅಗ್ನಿ ಶಾಮಕ ದಳದ ಸಿಬ್ವಂದಿ ಹಾಗೂ ಅರಣ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ತಾಲೂಕಿನಲ್ಲಿ ಬೇಸಿಗೆ ಬಿಸಿ ಹೆಚ್ಚಾಗಿರುವ ಹಿನ್ನೆಲೆ ತಾಪಮಾನವು ಕೂಡ ಏರಿಕೆಯಾಗಿದ್ದು, ಮಳೆ ಇಲ್ಲದೆ ಬಂಡೀಪುರ ಅಭಯಾರಣ್ಯ ಒಣಗಿ ನಿಂತಿದೆ. ಇದರಿಂದ ಅಭಯಾರಣ್ಯಕ್ಕೂ ಕೂಡ ಕಾಡ್ಗಿಚ್ಚಿನ ಆತಂಕ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next