Advertisement

ಕೇಡರ್‌ ಆಧಾರಿತ ರೈಲ್ವೆ  ಹುದ್ದೆಗಳ ವಿಲೀನ ಪ್ರಸ್ತಾಪ

06:00 AM Jun 03, 2018 | |

ನವದೆಹಲಿ: ರೈಲ್ವೆ ಇಲಾಖೆಯಲ್ಲಿರುವ ಕೇಡರ್‌ ಆಧಾರಿತ ಉನ್ನತ ಹುದ್ದೆಗಳನ್ನು ವಿಲೀನಗೊಳಿಸುವ ಹೊಸ ಪ್ರಸ್ತಾವನೆಯೊಂದನ್ನು ರೈಲ್ವೆ ಸಚಿವ ಪಿಯೂಶ್‌ ಗೋಯೆಲ್‌ ಮುಂದಿಟ್ಟಿದ್ದಾರೆ. 

Advertisement

ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮಟ್ಟ ಹಾಗೂ ಅದಕ್ಕಿಂತ ಮೇಲ್ಪಟ್ಟ ಹುದ್ದೆಗಳಲ್ಲಿ ಕೆಲವನ್ನು ವಿಲೀನಗೊಳಿಸಿ, ಅಧಿಕಾರಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಇರಾದೆ  ಪ್ರಸ್ತಾವನೆ ಹಿಂದಿದೆ ಎನ್ನಲಾಗಿದೆ. ಆದರೆ,  ಈ ಪ್ರಸ್ತಾವನೆಯನ್ನು ಕೆಲ ಅಧಿಕಾರಿಗಳು ಆಕ್ಷೇಪಿಸಿದ್ದಾರೆಂದು “ಇಂಡಿಯನ್‌ ಎಕ್ಸ್‌ಪ್ರಸ್‌’ ವರದಿ ಮಾಡಿದೆ

ಕ್ರಾಸಿಂಗ್‌ಗಳಲ್ಲಿ ಸಿಬ್ಬಂದಿ ನೇಮಕಾತಿ: ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಉಂಟಾಗುವ ಅಪಘಾತಗಳನ್ನು ತಪ್ಪಿಸಲು, ಅಪಾಯಕಾರಿ ಕ್ರಾಸಿಂಗ್‌ಗಳಲ್ಲಿ ರೈಲ್ವೆ ಇಲಾಖೆಯ ನಿವೃತ್ತ ನೌಕರರನ್ನು ನೇಮಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಉತ್ತರ ಪ್ರದೇಶದ ಖುಷಿನಗರ ಬಳಿಯ ರೈಲ್ವೆ ಕ್ರಾಸಿಂಗ್‌ನಲ್ಲಿ ಇತ್ತೀಚೆಗೆ ಶಾಲಾ ಬಸ್‌-ರೈಲಿನ ನಡು ವಿನ ಡಿಕ್ಕಿಯಲ್ಲಿ 20 ಮಕ್ಕಳು ದಾರುಣ ಸಾವಿಗೀಡಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next