Advertisement

ಕನಸಿನ ಮನೆ ಮುಕ್ತ ಮುಕ್ತ…

12:44 AM Jul 06, 2019 | Team Udayavani |

ಪ್ರತಿಯೊಬ್ಬರಿಗೂ ಸ್ವಂತ ಮನೆಯಿರಬೇಕು ಎಂಬ ಕನಸಿರುತ್ತದೆ. ಸಚಿವೆ ನಿರ್ಮಲಾ ಸೀತಾರಾಮನ್‌, ಅಂತಹ ಕನಸಿನ ಮನೆ ಹೊಂದಲು ಅನುಕೂಲವಾಗುವಂತಹ”ಎಲ್ಲರಿಗೂ ಮನೆ’ ಎಂಬ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

Advertisement

ಅಲ್ಲದೆ ಗೃಹ ಸಾಲಕ್ಕೂ ತೆರಿಗೆ ವಿನಾಯ್ತಿ ಘೋಷಿಸಿದ್ದು, 3.5 ಲಕ್ಷ ರೂ. ವರೆಗೆ ಬಡ್ಡಿ ವಿನಾಯ್ತಿ
ಪಡೆಯಬಹುದಾಗಿದೆ. 2020 ಮಾ.31ರ ಅವಧಿಯೊಳಗೆ ಪಡೆದುಕೊಂಡ ಸಾಲಕ್ಕೆ ಗರಿಷ್ಠ 3.5 ಲಕ್ಷ ರೂ. ಬಡ್ಡಿ ವಿನಾಯ್ತಿ ನೀಡಲಾಗುತ್ತದೆ (ಗರಿಷ್ಠ 45 ಲಕ್ಷ ರೂ.ವರೆಗಿನ ಮನೆ ಖರೀದಿಗೆ). ಒಂದು ವೇಳೆ ಮಧ್ಯಮವರ್ಗದ ವ್ಯಕ್ತಿಗಳು ಪಡೆಯುವ ಸಾಲದ ಅವಧಿ 15 ವರ್ಷಗಳದ್ದಾದರೆ, ಫ‌ಲಾನುಭವಿಗಳಿಗೆ 7 ಲಕ್ಷ ರೂ.ಗಳವರೆಗೆ ಬಡ್ಡಿ ವಿನಾಯಿತಿ ದೊರೆಯಲಿದೆ.

ಮನೆ ಬಾಡಿಗೆ ನಿಯಮದಲ್ಲಿ ಸುಧಾರಣೆ
ಮನೆ ಬಾಡಿಗೆ ನೀತಿ ಸಂಬಂಧಿಸಿದಂತೆ ಹಳೆಯ ನಿಯಮಗಳಿಗೆ ಮಹತ್ವದ ಸುಧಾರಣೆ ತರಲಾಗಿದೆ. ಸದ್ಯ ಇರುವ ನಿಯಮಾವಳಿ ಬಹಳಷ್ಟು ಹಳೆಯದಾಗಿದ್ದು,ಮನೆ ಮಾಲಿಕ ಮತ್ತು ಬಾಡಿಗೆದಾರ ನಡುವಿನ ವ್ಯವಹಾರಕ್ಕೆ ಹೆಚ್ಚು ಸೂಕ್ತವಾಗಿಲ್ಲ.ಹೀಗಾಗಿ ಮಾದರಿ ಮನೆ ಬಾಡಿಗೆ ನೀತಿ ರೂಪಿಸಲಾಗಿದೆ. ಬೇರೆ ರಾಜ್ಯಗಳಿಗೂ ಸುತ್ತೋಲೆ ಕಳುಹಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next