Advertisement
ಲೋಕಸಭೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಬಜೆಟ್ ಮಂಡಿಸಿದ ನಿರ್ಮಲಾ ಸೀತಾ ರಾಮನ್, ಮತ್ಸ್ಯೋದ್ಯಮ ಹಾಗೂ ಮೀನುಗಾರರ ಸಮುದಾಯ ಕೃಷಿಯೊಡನೆ ಅವಿನಾಭಾವ ಸಂಬಂಧ ಹೊಂದಿದ್ದು, ಗ್ರಾಮೀಣ ಭಾಗದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಮತ್ಸ್ಯೋದ್ಯಮದ ಆಡಳಿತ ನಿರ್ವಹಣಾ ಜಾಲದ ಅಭಿವೃದ್ಧಿಗೆ ಅನುವಾಗಲು ಮೀನುಗಾರಿಕಾ ಇಲಾಖೆಯಡಿ ನೂತನ ಮಹತ್ವಾಕಾಂಕ್ಷಿ ಯೋಜನೆ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ’ (ಪಿಎಂಎಂಎಸ್ವೈ) ಜಾರಿಗೊಳಿಸಲಾಗಿದೆ. ಇದು ಮೂಲಭೂತ ಸೌಕರ್ಯ ಅಭಿವೃದ್ಧಿ, ಉದ್ಯಮದ ಆಧುನೀಕರಣ, ಉತ್ಪಾದನೆ, ಉತ್ಪಾದನಾ ಸಾಮರ್ಥ್ಯ, ಗುಣಮಟ್ಟ ನಿಯಂತ್ರಣ, ಸಂಸ್ಕರಣೆ, ಮಾರುಕಟ್ಟೆ ಅಭಿವೃದ್ಧಿ ಸೇರಿದಂತೆ ಮೀನುಗಾರರು ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಕಾರ್ಯಗಳ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
Advertisement
ಮತ್ಸ್ಯ ಸಂಪದ ಜಾರಿ, ಮೀನು ಅಭಿವೃದ್ಧಿಗೆ ರಹದಾರಿ
01:11 AM Jul 06, 2019 | mahesh |
Advertisement
Udayavani is now on Telegram. Click here to join our channel and stay updated with the latest news.