Advertisement

ಏಕರೂಪ ಕಾನೂನು: ಕೇಂದ್ರಕ್ಕೆ ಸುಪ್ರೀಂ ಸೂಚನೆ

12:43 AM Mar 12, 2021 | Team Udayavani |

ಹೊಸದಿಲ್ಲಿ: ಆಸ್ತಿಯ ಮೇಲಿನ ಒಡೆತನದ ಹಕ್ಕು ಹಾಗೂ ಪಿತ್ರಾ ರ್ಜಿತವಾಗಿ ಬಂದ ಆಸ್ತಿಯನ್ನು ಅನುಭವಿಸುವ ಹಕ್ಕುಗಳಿಗೆ ಸಂಬಂಧಿಸಿದಂತೆ ಎಲ್ಲ ಜಾತಿ-ಧರ್ಮಗಳಿಗೆ ಒಂದೇ ರೀತಿಯ ಕಾನೂನು ಜಾರಿಯಾಗಬೇಕು ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೇಳಿದೆ.

Advertisement

ಹಿರಿಯ ವಕೀಲರಾದ ಅಶ್ವಿ‌ನಿ ಉಪಾಧ್ಯಾಯ ಎಂಬವರು ಒಟ್ಟು 4 ವಿಚಾರಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ. ಅದರಲ್ಲೊಂದು ಆಸ್ತಿಯ ಮೇಲಿನ ಒಡೆತನದ ಹಕ್ಕಿನ ಬಗ್ಗೆ ಯಾದರೆ, ಉಳಿದ ಮೂರು – ಏಕರೂಪ ದತ್ತು ಸ್ವೀಕಾರ, ಏಕರೂಪ ವಿಚ್ಛೇದನ, ಏಕರೂಪ ನಿರ್ವಹಣ ಕಾನೂನುಗಳು ಹಾಗೂ ಏಕರೂಪ ಜೀವನಾಂಶ ವಿಚಾರಗಳಿಗೆ ಸಂಬಂಧಿಸಿವೆ.

ಈ ಎಲ್ಲ ಅರ್ಜಿಗಳು, ಏಕರೂಪ ನಾಗರಿಕ ಸಂಹಿತೆಯ ಭಾಗವಾಗಿದ್ದು ಆಸ್ತಿ ವಿಚಾರಣೆ, ದತ್ತು ಸ್ವೀಕಾರ ಮುಂತಾದ ವಿಚಾರಗಳಲ್ಲಿ ಏಕರೂಪ ಕಾನೂನು ಜಾರಿಯಾದರೆ ದೇಶದ ಐಕ್ಯತೆಗೆ ಅದು ಮತ್ತಷ್ಟು ಪುಷ್ಟಿ ನೀಡುತ್ತದೆ ಎಂದು ವಕೀಲರು ತಮ್ಮ ಅರ್ಜಿಯಲ್ಲಿ ಉಲ್ಲೇಖೀಸಿದ್ದಾರೆ.

ವಕೀಲರು ಸಲ್ಲಿಸಿರುವ ಅರ್ಜಿಗಳಲ್ಲಿ ಮೊದಲು, ಆಸ್ತಿಯ ಮೇಲಿನ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿರುವ ನ್ಯಾಯಪೀಠ, ಕೇಂದ್ರಕ್ಕೆ ತನ್ನ ಅಭಿಪ್ರಾಯ ತಿಳಿಸುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next