Advertisement

ಅಪರಿಚಿತ ವಾಹನ ಢಿಕ್ಕಿ: ರಸ್ತೆಯಲ್ಲಿ ಮಲಗಿದ್ದ ಬಿಡಾಡಿ ದನಗಳು ಸಾವು

05:06 PM Sep 03, 2022 | Team Udayavani |

ಕೊಟ್ಟಿಗೆಹಾರ: ಅಪರಿಚಿತ  ವಾಹನ ಹರಿದು ರಸ್ತೆಯಲ್ಲಿ ಮಲಗಿದ್ದ ಮೂರು ಬಿಡಾಡಿ ದನಗಳು ಸ್ಥಳದಲ್ಲೇ  ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಬಗ್ಗಸಗೊಡು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Advertisement

ಧರ್ಮಸ್ಥಳ ಹಾಗೂ ಮಂಗಳೂರು ಮತ್ತು ಹೊರನಾಡು , ಶೃಂಗೇರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ವಾಹನಗಳು   ರಸ್ತೆಯ ಮೂಲಕ ಚಲಿಸುತ್ತಿದ್ದು, ಬಿಡಾಡಿ ದನಗಳಿಂದ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ.

ಕೆಲವು ದನಗಳ ವಾರಸುದಾರರು ಇದ್ದರೂ ಕೂಡ ಕಟ್ಟದೇ ಬೇಕಾಬಿಟ್ಟಿ ರಸ್ತೆಯಲ್ಲಿಯೇ  ಬಿಟ್ಟಿರುತ್ತಾರೆ. ಕಳೆದ ಒಂದು ತಿಂಗಳಿಂದ 50 ಕ್ಕೂ ಹೆಚ್ಚು ದನಗಳು ವಾಹನಗಳು ಢಿಕ್ಕಿ ಹೊಡೆದು  ಸಾವನ್ನಪ್ಪಿವೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿ ದೊಡ್ಡ ಹಗರಣ; ಶಾಸಕ ಎ.ಮಂಜುನಾಥ್ ಆರೋಪ

ಕೂಡಲೇ ಆಯಾಯ ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಅಧಿಕಾರಿಗಳು ತಕ್ಷಣ ದನಗಳನ್ನು ಗೋ ಶಾಲೆಗೆ ಬಿಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next