Advertisement

ವ್ಯಕ್ತಿಯನ್ನು ಕೊಂದು ರಿಕ್ಷಾ ಸಮೇತ ಸುಟ್ಟು ಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಶೋಧ ಕಾರ್ಯ

02:01 PM Jan 24, 2021 | Team Udayavani |

ಬಂಗಾರಪೇಟೆ: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಆಟೋ ಸಮೇತ ಸುಟ್ಟು ಹಾಕಿರುವ ಘಟನೆ ತಾಲೂಕಿನ ಹೊರ ವಲಯದ ಮಲ್ಲಂಗುರ್ಕಿ ಗ್ರಾಮದ ಬಂಗಾರಪೇಟೆ-ಕೆಜಿಎಫ್ ರೈಲ್ವೆ ಸೇತುವೆ ಬಳಿ ನಡೆದಿದೆ.

Advertisement

ಪಟ್ಟಣದ ಗಂಗಮ್ಮನಪಾಳ್ಯದ ರಮೇಶ್‌ ಎಂಬುವವರು ಆಟೋ ಓಡಿಸುತ್ತಿದ್ದು, ಶುಕ್ರವಾರ ರಾತ್ರಿ ವೇಳೆ ಆಟೋದಲ್ಲಿಯೇ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಬೆಂಕಿ ಇಟ್ಟು ಸುಟ್ಟಿದ್ದಾರೆ. ಕೊಲೆಯಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸುಟ್ಟಿರುವ ಆಟೋ ಓಡಿಸುತ್ತಿದ್ದ ಗಂಗಮ್ಮನಪಾಳ್ಯ ರಮೇಶ್‌ ಸಹ ಕಾಣೆಯಾಗಿರುವ ಬಗ್ಗೆ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಲೆಯಾದ ವ್ಯಕ್ತಿಗಾಗಿ ಪತ್ತೆ ಮಾಡಲಾಗುತ್ತಿದೆ.

ಸ್ಥಳಕ್ಕೆ ಕೆಜಿಎಫ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್‌, ಡಿವೈಎಸ್‌ಪಿ ಉಮೇಶ್‌, ಸರ್ಕಲ್‌ ಇನ್ಸ್ ಪೆಕ್ಟರ್‌ ಬಿ.ಸುನೀಲ್‌ ಕುಮಾರ್‌, ಸಬ್‌ ಇನ್ಸ್‌ಪೆಕ್ಟರ್‌ ಆರ್‌. ಜಗದೀಶರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next