Advertisement

ಪ್ರಜ್ಞಾ ಕಣ್ಣೀರು ಒರೆಸಿದ ಉಮಾ

02:14 AM Apr 30, 2019 | Sriram |

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರನ್ನು ಸೋಮವಾರ ಭೇಟಿಯಾದ ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಠಾಕೂರ್‌, ಭಾವುಕರಾಗಿ ಕಣ್ಣೀರು ಹಾಕಿದರು.

Advertisement

ಪಕ್ಷದ ಕೆಲವಾರು ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಉಮಾಭಾರತಿಯವರನ್ನು ಭೇಟಿ ಮಾಡಿದ ಠಾಕೂರ್‌, ಕೆಲವು ಕಾಲ ಮಾತುಕತೆ ನಡೆಸಿದರು. ಅನಂತರ, ಉಮಾ ಭಾರತಿ ನಿವಾಸದಿಂದ ಹೊರಬಂದ ಅವರು, ತಾವು ಆಗಮಿಸಿದ್ದ ಎಸ್‌ಯುವಿ ವಾಹನದಲ್ಲಿ ಕುಳಿತ ಕೂಡಲೇ ಅಳಲಾರಂಭಿಸಿದರು. ಕಾರಿನ ಪಕ್ಕದಲ್ಲೇ ಇದ್ದ ಉಮಾಭಾರತಿ, ಪ್ರಜ್ಞಾ ಅವರ ಕಣ್ಣೀರನ್ನು ಒರೆಸಿ ಸಾಂತ್ವನ ಹೇಳಿದರು. ಜತೆಗೆ, ಸಾಧ್ವಿ ಪ್ರಜ್ಞಾ ಅವರ ಗೆಲುವು ನಿಶ್ಚಿತ ಎಂದೂ ಉಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next