Advertisement

Siddapura ಉಳ್ಳೂರು-74: ರಿಕ್ಷಾ ಢಿಕ್ಕಿ; ಬೈಕ್‌ ಸವಾರ ಗಂಭೀರ

09:19 PM Dec 31, 2023 | Team Udayavani |

ಸಿದ್ದಾಪುರ: ಉಳ್ಳೂರು-74 ಗ್ರಾಮದ ಕಳಿನಜೆಡ್ಡು ಎಂಬಲ್ಲಿ ಅತಿವೇಗದಿಂದ ಬಂದ ರಿಕ್ಷಾವೊಂದು ಬೈಕಿಗೆ ಢಿಕ್ಕಿ ಹೊಡೆದಿದ್ದು, ಸವಾರ ಶ್ರೀನಾಥ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

Advertisement

ಆಟೋ ಚಾಲಕ ರವೀಂದ್ರ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ವೇತಾ ಅವರಿಗೂ ಗಾಯಗಳಾಗಿವೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಜ್ರಿ: ಯುವಕ ನಾಪತ್ತೆ
ಸಿದ್ದಾಪುರ: ಕುಂದಾಪುರ ತಾಲೂಕು ಆಜ್ರಿ ಗ್ರಾಮದ ಉದಯ (48) ಅವರು ಡಿ.29ರಿಂದ ನಾಪತ್ತೆಯಾಗಿದ್ದಾರೆ.

ಆಜ್ರಿ ಗ್ರಾಮದ ಹೊಳಂದೂರಿನ ಪತ್ನಿ ಮನೆಯಿಂದ ಕೆಲಸಕ್ಕೆಂದು ಹೋದವರು ಮರಳಿ ಬಂದಿಲ್ಲ ಎಂದು ಸಹೋದರ ಗುಣಾಕರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next