Advertisement

ಉಳ್ಳಾಲ: ಮಾದಕ ದ್ರವ್ಯ ಮಾರಾಟಕ್ಕೆ ಯತ್ನ: ಎಂಡಿಎಂಎ ಸಹಿತ ಆರೋಪಿ ಬಂಧನ

09:01 PM Jan 07, 2023 | Team Udayavani |

ಉಳ್ಳಾಲ: ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ ಡ್ರಗ್ಸ್‌ ಸೇರಿದಂತೆ 2,06,000 ರೂ. ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಮಂಜೇಶ್ವರ ಗೇರುಕಟ್ಟೆ ನಿವಾಸಿ ಅಬ್ದುಲ್ಲಾ ಬಿ. ಯಾನೆ ಸದ್ದಾಂ ಬಂಧಿತ. ಆರೋಪಿ ನಾಟೆಕಲ್‌ ವಿಜಯನಗರ ಎನ್ನುವಲ್ಲಿ ಬೈಕ್‌ನಲ್ಲಿ ಬಂದು ಎಂಡಿಎಂಎ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದಾರೆ. ಬೈಕ್‌ ಮೇಲೆ ಕುಳಿತಿದ್ದವನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಯು ಅಕ್ರಮವಾಗಿ ನಿಷೇಧಿತ 8 ಗ್ರಾಂ ಎಂಡಿಎಂಎ ತಂದು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿಷೇಧಿತ ಮಾದಕ ವಸ್ತುವಿನ ಮೌಲ್ಯ 40,000 ರೂ. ಮತ್ತು ಮೊಬೈಲ್‌ಗ‌ಳು ಹಾಗೂ ಬೈಕ್‌ನ ಮೌಲ್ಯ 1,56,000 ಒಟ್ಟು 2,06,000 ರೂ ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಆಂಶುಕುಮಾರ್‌, ಡಿಸಿಪಿ ಅಪರಾಧ ಮತ್ತು ಸಂಚಾರ ದಿನೇಶ್‌ ಕುಮಾರ್‌ ಹಾಗೂ ಎಸಿಪಿ ದಿನಕರ ಶೆಟ್ಟಿ ಅವರ ನಿರ್ದೇಶನದಂತೆ ಇನ್‌ಸ್ಪೆಕ್ಟರ್‌ ಪ್ರಕಾಶ್‌ ನೇತೃತ್ವದಲ್ಲಿ ಪಿಎಸ್ಸೆ„ ಶರಣಪ್ಪ ಭಂಡಾರಿ ಹಾಗೂ ಸಿಬಂದಿ ಶಿವಕುಮಾರ್‌, ಪುರುಷೋತ್ತಮ, ಸುರೇಶ್‌, ಪ್ರಶಾಂತ ದೀಪಕ್‌, ಶೈಲೆಂದ್ರ, ಮಂಜಪ್ಪ ಅವರ ತಂಡ ಭಾಗವಹಿಸಿದ್ದರು.

ಇದನ್ನೂ ಓದಿ: ಕಾರ್ಕಳ: ಬಸ್ಸಿಗೆ ಬಿಡುತ್ತೇವೆಂದು ಹೇಳಿ ಬಂಗಾರ, ನಗದು ಎಗರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next