Advertisement

Ullal ;ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆ

12:59 AM Mar 11, 2024 | Team Udayavani |

ಉಳ್ಳಾಲ: ಕುಂಪಲ ಕುಜುಮಗದ್ದೆ ಬಳಿ ಮನೆಯೊಂದರಲ್ಲಿ ವಿವಾಹಿತನ ಮೃತದೇಹ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂರು ದಿನಗಳ ಹಿಂದೆ ಆತ್ಮಹತ್ಯೆಗೈದಿರುವುದರಿಂದ ಮೃತದೇಹ ಸಂಪೂರ್ಣ ಕೊಳೆತುಹೋಗಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕುಂಪಲ, ಕುಜುಮಗದ್ದೆ ನಿವಾಸಿ ಕಿರಣ್‌ ಕುಮಾರ್‌ (48) ಮೃತರು.

ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಹೌಸ್‌ ಕೀಪಿಂಗ್‌ ಕೆಲಸ ನಿರ್ವಹಿಸುತ್ತಿದ್ದರು. ಮಾ. 7ರಂದು ರಾತ್ರಿ ಮನೆ ಸೇರಿದ್ದ ಕಿರಣ್‌ ಮತ್ತೆ ಹೊರ ಬಂದಿರಲಿಲ್ಲ. ರವಿವಾರ ಬೆಳಗ್ಗೆ ಪರಿಸರದ ಜನರಿಗೆ ದುರ್ವಾಸನೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಸಮಕ್ಷಮದಲ್ಲಿ ಸೋಮೇಶ್ವರ ಪುರಸಭಾ ಸದಸ್ಯ ದೀಪಕ್‌ ಪಿಲಾರ್‌ ಮನೆ ಬಾಗಿಲು ಮುರಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಕಿರಣ್‌ ಅವರ ಕೊಳೆತ ಶವ ಪತ್ತೆಯಾಗಿದೆ. ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next