Advertisement

ಉಳಾಯಿಬೆಟ್ಟು ವಿಶೇಷ ಗ್ರಾಮಸಭೆ

11:21 AM Jan 12, 2018 | |

ಉಳಾಯಿಬೆಟ್ಟು : ಉದ್ಯೋಗ ಚೀಟಿ ಹೊಂದಿದ ಕೆಲ ಮಹಿಳೆಯರು ಮಾಹಿತಿ ಕೊರತೆಯಿಂದ ದಾಖಲೆ ಸಲ್ಲಿಸದಿರುವುದರಿಂದ ಕಾಮಗಾರಿ ನಡೆದರೂ ಹಣ ಸಿಕ್ಕಿಲ್ಲವೆಂದು ಇಲ್ಲಿನ ಗ್ರಾ.ಪಂ.ನ ವಿಶೇಷ ಗ್ರಾಮಸಭೆಯಲ್ಲಿ ಕೆಲವು ಮಹಿಳೆಯರು ತಮ್ಮ ಸಮಸ್ಯೆ ಹೇಳಿಕೊಂಡರು.

Advertisement

ಉಳಾಯಿಬೆಟ್ಟು ಗ್ರಾ.ಪಂ.ನ ದ್ವಿತೀಯ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋ ಧನ ವಿಶೇಷ ಗ್ರಾಮ ಸಭೆಯು ಪಂ.ಸಭಾಭವನದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಬಗ್ಗೆ ಗ್ರಾ.ಪಂ. ಸಿಬಂದಿ ಹಾಗೂ ಉದ್ಯೋಗ ಚೀಟುದಾರರಲ್ಲಿ ಹೊಂದಾಣಿಕೆ ಇಲ್ಲದೇ ಇರುವುದು ಕಂಡು ಬಂದಿದೆ. ಉದ್ಯೋಗ ಖಾತರಿ ಯೋಜನೆಯಡಿ ಫೈಲ್‌, ಎನ್‌ಎಂಆರ್‌, ಫೋಟೋವನ್ನು ಬೇರೆ ಬೇರೆ ಸಿಬಂದಿ ಮಾಡುತ್ತಿರುವುದು ಈ ಸಮಸ್ಯೆಗಳಿಗೆ ಕಾರಣ. ಇನ್ನುಮುಂದೆ ಒಬ್ಬರೇ ಇದನ್ನು ನಿರ್ವಹಿಸಬೇಕು ಎಂದರು.

12 ಕಾಮಗಾರಿ ಪೂರ್ಣ
ತಾಲೂಕು ಸಂಯೋಜಕಿ ಪವಿತ್ರಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪರಿಶೋಧನೆಯಲ್ಲಿ ಉದ್ಯೋಗ ಚೀಟಿಯಲ್ಲಿ ವಿವರ ನಮೂದಿಸಿಲ್ಲ. ಉದ್ಯೋಗ ಚೀಟಿ ನವೀಕರಿಸಿಲ್ಲ. ಎಂಜಿನಿಯರ್‌ ದಿನಾಂಕ ನಮೂದಿಸಿಲ್ಲ. ಅಧ್ಯಕ್ಷ ಹಾಗೂ ಪಿಡಿಒ ಸಹಿ ಇಲ್ಲ. 8 ಕಡೆಗಳಲ್ಲಿ ನಾಮಫಲಕ ಇಲ್ಲ ಎಂದು ಪವಿತ್ರಾ ತಿಳಿಸಿದರು. 878 ಉದ್ಯೋಗ ಚೀಟಿ ಹೊಂದಿದ್ದಾರೆ. ಅದರಲ್ಲಿ 460 ಸಕ್ರಿಯ ಉದ್ಯೋಗ ಚೀಟಿ ಹೊಂದಿದ್ದಾರೆ. 24 ಗ್ರಾ.ಪಂ. 3 ತೋಟಗಾರಿಕ ಇಲಾಖೆ ಒಟ್ಟು 27 ಕಾಮಗಾರಿಗಳು ನಡೆದಿದೆ. 12 ಕಾಮಗಾರಿಗಳು ಮುಗಿದಿವೆ. ಒಟ್ಟು ರೂ. 1,49,980 ವೆಚ್ಚವಾಗಿದೆ ಎಂದರು.
ತೋಟಗಾರಿಕೆ ಇಲಾಖಾಧಿಕಾರಿ ಪ್ರಕಾಶ್‌ ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಸೌಮ್ಯಾ ಪಂಡಿತ್‌ ಉಪಸ್ಥಿತರಿದ್ದರು. ಪಿಡಿಒ ರಾಜೇಂದ್ರ ಶೆಟ್ಟಿ ಸ್ವಾಗತಿಸಿ, ಗ್ರಾಮ ಸಂಪನ್ಮೂಲ ವ್ಯಕ್ತಿ ಸುನೀತಾ ನಿರೂಪಿಸಿದರು. ಕಾರ್ಯದರ್ಶಿ ರಾಮಪ್ಪ ವಂದಿಸಿದರು.

ಪ್ರೋತ್ಸಾಹಿಸಿ
ಮಾಹಿತಿ ಕೊರತೆಯಿಂದ ಕೆಲವರಿಗೆ ತೊಂದರೆಯಾಗಿದೆ. ಉದ್ಯೋಗ ಖಾತರಿ ಲಾಭದ ಬಗ್ಗೆ ಇನ್ನೊಬ್ಬರಿಗೆ ಹೇಳಿ ಪ್ರೋತ್ಸಾಹಿಸಬೇಕು. ಹೆಚ್ಚು ಕಾಮಗಾರಿಗಳು ಆಗಬೇಕು. ಪಂ.ನ 14ನೇ ಹಣಕಾಸು ನಿಧಿಯಿಂದ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ಸಾಧ್ಯವಿಲ್ಲ.
ವಸಂತ ಕುಮಾರ್‌
   ಗ್ರಾ.ಪಂ.ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next