Advertisement

ಉತ್ತರಾಖಂಡ ಹೂಡಿಕೆ ಶೃಂಗ: 20,000 ಕೋಟಿ ರೂ. ನಿರೀಕ್ಷೆ

05:38 PM Sep 01, 2018 | udayavani editorial |

ಹೊಸದಿಲ್ಲಿ : ಮುಂದಿನ ತಿಂಗಳು ನಡೆಯಲಿರುವ ಹೂಡಿಕೆದಾರರ ಶೃಂಗದಲ್ಲಿ ಕನಿಷ್ಠ 20,000 ಕೋಟಿ ರೂ. ಹೂಡಿಕೆಯನ್ನು ಉತ್ತರಾಖಂಡ ಆಕರ್ಷಿಸಲಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ.

Advertisement

ಬೆಂಗಳೂರು, ಅಹ್ಮದಾಬಾದ್‌, ಮುಂಬಯಿ ಮತ್ತು ದಿಲ್ಲಿಯಲ್ಲಿ ರೋಡ್‌ ಶೋ ಕೈಗೊಂಡು ಹೂಡಿಕೆದಾರರನ್ನು ಆಕರ್ಷಿಸಲಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಾವತ್‌ ಅವರು “ಕೈಗಾರಿಕೆಗಳಿಗೆ ಭೂಮಿ ಒದಗಿಸುವುದಕ್ಕೆ ಉತ್ತರಾಖಂಡಕ್ಕೆ ಇರುವ ಇತಿಮಿತಿಗಳನ್ನು ನಾನು ತಿಳಿದಿದ್ದೇನೆ; ಆದರೆ ರಾಜ್ಯದೆಡೆಗೆ ಹರಿದು ಬರುವ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವಲ್ಲಿ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next