Advertisement

ಉಜಿರೆ: ಬಾಲಕ ಅಪಹರಣ ಪ್ರಕರಣದ ಓರ್ವ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

05:51 PM Jan 08, 2021 | Team Udayavani |

ಬೆಳ್ತಂಗಡಿ: ಉಜಿರೆಯಲ್ಲಿ ಇತ್ತೀಚೆಗೆ ನಡೆದಿದ್ದ ಮಗು ಅಪಹರಣ ಪ್ರಕರಣದ ಪ್ರಮುಖ ಆರೋಪಿಯಲ್ಲೋರ್ವನಾದ ಬೆಂಗಳೂರಿನ ವಸತಿಗೃಹವೊಂದರ ರೂಮ್ ಬಾಯ್ ನನ್ನು ಕಳೆದ 15 ದಿವನಗಳ ಹಿಂದೆ ಬಂಧಿಸಿ ತನಿಖೆ ನಡೆಸಲಾಗಿದ್ದು, ಇದೀಗ ಈತನೂ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ಖಚಿತವಾಗಿದೆ.

Advertisement

ಆರೋಪಿ ಚಾಮರಾಜನಗರ ನಿವಾಸಿ ನವೀನ್ (28) ಎಂಬುವನಾಗಿದ್ದು, ಪೊಲೀಸರು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಡಿ.17 ರಂದು ಮಗುವನ್ನು ಅಪಹರಿಸಿದ ತಂಡದ ನಾಲ್ವರನ್ನು ಬಂಧಿಸಿ ಮಗುವನ್ನು ಸುರಕ್ಷಿತವಾಗಿ ಕರೆತರಲಾಗಿತ್ತು. ಇದಾದ ಎರಡು ದಿನಗಳಲ್ಲಿ ನವೀನ್ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ ತನಿಖೆ ಪೂರ್ಣಗೊಳ್ಳದ ಹಿನ್ನೆಲೆ ಆರೋಪಿ ಎಂದು ಪೊಲೀಸರು ಖಚಿತ ಪಡಿಸಿರಲಿಲ್ಲ. ಇದೇ ಈತನೂ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ.

ಇದನ್ನೂ ಓದಿ:ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಾಖಲೆ ಏರಿಕೆ, ನಿಫ್ಟಿ ಸಾರ್ವಕಾಲಿಕ ದಾಖಲೆ

Advertisement

Udayavani is now on Telegram. Click here to join our channel and stay updated with the latest news.

Next