Advertisement

ಉಜಿರೆ: ರಸ್ತೆಗೆ ಉರುಳಿದ ಮರ

10:47 PM Sep 08, 2019 | Team Udayavani |

ಬೆಳ್ತಂಗಡಿ : ಉಜಿರೆ- ಚಾರ್ಮಾಡಿ ರಸ್ತೆಯ ಉಜಿರೆ ಪೆಟ್ರೋಲ್‌ ಬಂಕ್‌ ಸಮೀಪ ಬೃಹದಾಕಾರದ ಮರವೊಂದು ರವಿವಾರ ರಸ್ತೆಗೆ ಉರುಳಿ ಬಿದ್ದು ಕೆಲವು ಕಾಲ ರಸ್ತೆ ತಡೆ ಉಂಟಾಯಿತು.

Advertisement

ರವಿವಾರ ರಜೆಯಾದ್ದರಿಂದ ವಾಹನ ಓಡಾಟ ವಿರಳವಾಗಿತ್ತು. ಇದರಿಂದ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿದೆ. ಸಂಚಾರಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬಂದಿ, ಸ್ಥಳೀಯರು ಮರ ತೆರವುಗೊಳಿಸಲು ಸಹಕರಿಸಿದರು.

ರಸ್ತೆ ಅಂಚಿನ ಅಪಾಯಕಾರಿ ಮರ ಕೊಂಬೆ ಕಟಾವು ಮಾಡುವ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತಂತೆ ಕಾಣುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆ ಆ್ಯಂಬುಲೆನ್ಸ್‌ ಅಪಾಯದಲ್ಲಿ ಸಿಲುಕಿತ್ತು. ಇನ್ನಾದರೂ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಂಭವಿಸಬಹುದಾದ ಜೀವ ಹಾನಿ ತಪ್ಪಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next