Advertisement

ಉಗ್ರಪ್ಪ ಪ್ರಶ್ನೆಗೆ ಕಂಗಾಲು; ಈ ಬಾರಿಯೂ ಕುಸಿದು ಬಿದ್ದ ಅಧಿಕಾರಿ !

04:59 PM Aug 01, 2017 | Team Udayavani |

ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ  ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಅಧಿಕಾರಿಯೊಬ್ಬರು ಧಿಡೀರ್‌ ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ. 

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುಂದರ್‌ ಪೂಜಾರಿ ಅವರು ಉಗ್ರಪ್ಪ ಅವರು ಕೇಳಿದ ಪ್ರಶ್ನೆಗೆ ತಳಮಳಗೊಂಡು ಉತ್ತರಿಸುತ್ತಿದ್ದ ವೇಳೆಯೇ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. 

ಕೂಡಲೇ ಸುಂದರ್‌ ಪೂಜಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. 

2016ರ ಜ. 23ರಂದು ದ.ಕ. ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಇದೇ ಸಮಿತಿ ಸಭೆಯ ಸಂದರ್ಭದಲ್ಲಿಯೂ ತಮ್ಮ ಇಲಾಖೆಯ ವರದಿ ನೀಡುವ ವೇಳೆ ಉಗ್ರಪ್ಪ ಅವರ
ತೀಕ್ಷ್ಣ ಮಾತುಗಳಿಂದ ಸುಂದರ ಪೂಜಾರಿ ಅವರು ನಿಂತಲ್ಲಿಯೇ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.ಮಂಗಳವಾರ ಸಭೆ ಆರಂಭದಲ್ಲಿಯೇ ಸುಂದರ ಪೂಜಾರಿ ಅವರ ಯೋಗಕ್ಷೇಮ ವನ್ನು ನಗುತ್ತಲೇ ಉಗ್ರಪ್ಪರು ವಿಚಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next