Advertisement

Udyavara: ರಿಕ್ಷಾ ಚಾಲಕ ನೇಣಿಗೆ ಶರಣು

12:05 AM Jul 11, 2023 | Team Udayavani |

ಕಾಪು: ಉದ್ಯಾವರ ಬೋಳಾರುಗುಡ್ಡೆ ನಿವಾಸಿ, ಆಟೋ ರಿಕ್ಷಾ ಚಾಲಕ ಚಂದ್ರೇಶ್‌ (52) ಅಸೌಖ್ಯದಿಂದ ಮನನೊಂದು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ತಡರಾತ್ರಿ ನಡೆದಿದೆ.

Advertisement

ಉದ್ಯಾವರ ಗ್ರಾ. ಪಂ. ಕಚೇರಿ ಬಳಿಯ ನಿವಾಸಿ ಚಂದ್ರೇಶ್‌ (ಚಂದ್ರು) ವೃತ್ತಿಯಲ್ಲಿ ರಿûಾ ಚಾಲಕನಾಗಿದ್ದು ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದಾಗಿ ಅನಾರೋಗ್ಯಕ್ಕೀಡಾಗಿದ್ದರು. ಎರಡು ವರ್ಷಗಳಿಂದ ಕಾಲಿಗೆ ಆದ ನೋವಿನಿಂದ ಬಳಲುತ್ತಿದ್ದ ಅವರು ಸೋಮವಾರ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಬೇಕಿತ್ತು. ಇದರ ನಡುವೆ ರವಿವಾರ ಮಧ್ಯರಾತ್ರಿ ಮನೆಯ ಮುಂಭಾಗದಲ್ಲಿರುವ ನೆರೆಮನೆಯವರ ಪಕ್ಕಾಸಿಗೆ ನೇಣು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉದ್ಯಾವರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯರಾಗಿದ್ದ ಚಂದ್ರೇಶ್‌ ಅವಿವಾಹಿತರಾಗಿದ್ದು ಸಹೋದರ – ಸಹೋದರಿಯನ್ನು ಅಗಲಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next