Advertisement

Udyavara ಸೇತುವೆಯಿಂದ ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

11:11 PM Dec 13, 2023 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆಯ ಮೇಲೆ ಬುಧವಾರ ವ್ಯಕ್ತಿಯೋರ್ವ ತನ್ನ ಸ್ಕೂಟಿಯನ್ನು ನಿಲ್ಲಿಸಿ ಹೊಳೆಗೆ ಹಾರಿದ್ದು ರಾತ್ರಿಯ ವೇಳೆಗೆ ಸುಮಾರು 2 ಕಿ.ಮೀ. ದೂರದ ಅಂಕುದ್ರು ಬಳಿ ಶವ ಪತ್ತೆಯಾಗಿದೆ.

Advertisement

ಉಡುಪಿಯ ಎಲೆಕ್ಟ್ರಾನಿಕ್ಸ್‌ ಮತ್ತು ಗೃಹೊಪಯೋಗಿ ಸಂಸ್ಥೆಯೊಂದರ ವಾಹನ ಚಾಲಕ ಬೆಂಗಳೂರು ಮೂಲದ ರವೀಂದ್ರ ಭಟ್‌ (52) ಮೃತ ವ್ಯಕ್ತಿ.

ಬುಧವಾರ ಬೆಳಗ್ಗೆ ಉದ್ಯಾವರ ಸೇತುವೆಯ ಮೇಲೆ ನಿಲ್ಲಿಸಲಾಗಿದ್ದ ಸ್ಕೂಟಿಯಲ್ಲಿ ಮೊಬೈಲ್‌ ಫೋನು, ಪರ್ಸ್‌ ದಾಖಲೆ ಪತ್ರಗಳು ಮತ್ತು ವ್ಯಕ್ತಿಯ ಚಪ್ಪಲಿಗಳು ದೊರಕಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಕಟಪಾಡಿ ಹೊರಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು, ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬಂದಿ ಪಾಪನಾಶಿನಿ ಹೊಳೆಯಲ್ಲಿ ಹುಡುಕಾಟ ನಡೆಸಿದರು. ರಾತ್ರಿ ವೇಳೆಗೆ ಶವ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next