Advertisement

ರಸ್ತೆ ಹೊಂಡಗಳಲ್ಲಿ ವಾಹನ ಸವಾರರ ಪರದಾಟ 

06:00 AM Sep 06, 2018 | Team Udayavani |

ಕಟಪಾಡಿ:  ಉದ್ಯಾವರ ಗ್ರಾ. ಪಂ. ಮತ್ತು ಕೋಟೆ ಗ್ರಾ.ಪಂ.ವ್ಯಾಪ್ತಿಯ ಉದ್ಯಾವರ ಪಡುಕೆರೆ, ಮಟ್ಟು, ಕೈಪುಂಜಾಲು ಸಂಪರ್ಕದ ಸಮುದ್ರ ಬದಿಯ ರಸ್ತೆಯಲ್ಲಿ ಹೊಂಡಗಳು ತುಂಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. 

Advertisement

ಈ ರಸ್ತೆ ಮಲ್ಪೆಗೆ ಸಂಪರ್ಕ ಕಲ್ಪಿಸುವುದರಿಂದ ಈ ಭಾಗದಲ್ಲಿ ದಿನವಹಿ ಬಸ್‌ಗಳೊಂದಿಗೆ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರವಾಸಿಗರೂ ಇದನ್ನೇ ಬಳಸುತ್ತಾರೆ. ಆದರೆ ರಸ್ತೆ ಹದಗೆಟ್ಟಿರು ವುದು ಈ ಭಾಗದವರಿಗೆ ಇನ್ನಿಲ್ಲದ ಸಮಸ್ಯೆಯಾಗಿದೆ.  

12 ವರ್ಷದ ಹಿಂದೆ ಡಾಮರು
ಸುಮಾರು 12 ವರ್ಷಗಳ ಹಿಂದೆ ಈ ರಸ್ತೆ ಡಾಮರು ಕಂಡಿತ್ತು. ಬಳಿಕ ಡಾಮರು ಕಂಡಿಲ್ಲ. ಅಧಿಕ ಭಾರದ  ಸಮುದ್ರದ ತಡೆಗೋಡೆ ಕಲ್ಲು ಸಾಗಿಸುವ ವಾಹನಗಳು ಸಂಚರಿಸಿ ಸುಮಾರು 8 ಕಿ.ಮೀ.ನಷ್ಟು ಉದ್ದಕ್ಕೆ ರಸ್ತೆ ಹಾಳಾಗಿದೆ.  

 ಬಾಡಿಗೆ ದರಕ್ಕಿಂತ ದುಪ್ಪಟ್ಟು ದರ 
ಈ ರಸ್ತೆಯಲ್ಲಿ ರಿಕ್ಷಾ ಓಡಿಸಿದರೆ ಹಾನಿ ಗೀಡಾಗುತ್ತವೆ. ಬಾಡಿಗೆ ದರಕ್ಕಿಂತ ದುಪ್ಪಟ್ಟು ದರವನ್ನು ರಿಕ್ಷಾ ರಿಪೇರಿಗೆ ವ್ಯಯಿಸಬೇಕಾಗಿದೆ.
– ನವೀನ್‌ಭಾಸ್ಕರ್‌ ರಿಕ್ಷಾ ಚಾಲಕ 

Advertisement

Udayavani is now on Telegram. Click here to join our channel and stay updated with the latest news.

Next