Advertisement

ಉದ್ಯಾವರ: ಪಡುಕರೆ ಭಾಗದಲ್ಲಿ ಮುಂದುವರಿದ ಕಡಲ ಅಬ್ಬರ  

10:56 PM Jun 13, 2019 | sudhir |

ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಕರೆ ಪರಿಸರದಲ್ಲಿ ಕಡಲಿನ ಅಬ್ಬರವು ಮಂಗಳವಾರವೂ ಮುಂದುವರಿದಿದೆ.
ಕಡಲಿನ ನೀರಿನ ಸೆರೆಯ ಅಬ್ಬರದಿಂದ ಸಮುದ್ರದ ನೀರು ಮಲ್ಪೆ ಸಂಪರ್ಕದ ಪ್ರಮುಖ ರಸ್ತೆಯನ್ನೂ ದಾಟಿದ್ದು, ಶ್ರೀರಾಮಭಕ್ತ ಹನುಮಾನ್‌ ಭಜನ ಮಂದಿರ ಬಳಿಯ ಮೋಹನ್‌ ಮೆಂಡನ್‌, ಕಾವೇರಿ ಸುವರ್ಣ ಎಂಬವರ ಮನೆ ಬಳಿಯಲ್ಲಿ ತೋಟದೊಳಕ್ಕೆ ನುಗ್ಗಿ ಪೂರ್ವ ಪಾರ್ಶ್ವದಲ್ಲಿರುವ ಪಾಪನಾಶಿನಿ ಹೊಳೆಗೆ ಸೇರಿತ್ತು. ರಸ್ತೆಯ ಮೇಲೆಲ್ಲಾ ಮರಳು ತುಂಬಿತ್ತು.

Advertisement

ಈ ಬಗ್ಗೆ ಮಾಹಿತಿ ಪಡೆದ ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಸಂಜೆಯ ವೇಳೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದು ಅಪರ ಜಿಲ್ಲಾಧಿಕಾರಿ ಮತ್ತು ಎ.ಡಿ.ಬಿ. ಎಂಜಿನಿಯರ್‌ ಅವರೊಂದಿಗೆ ಸುರಕ್ಷತೆಯನ್ನು ಕಲ್ಪಿಸುವಂತೆ ಫೋನ್‌ ಮೂಲಕ ಸಂಪರ್ಕಿಸಿ ತಿಳಿಸಿರುತ್ತಾರೆ.

ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆಯನ್ನೂ ನಡೆಸಿರುತ್ತಾರೆ.

ಈ ಸಂದರ್ಭ ಉಡುಪಿ ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷ ಗಣೇಶ್‌ ಕುಮಾರ್‌ ಉದ್ಯಾವರ, ಗ್ರಾ.ಪಂ.ಸದಸ್ಯ ರವಿ ಕೋಟ್ಯಾನ್‌, ಸ್ಥಳೀಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next