Advertisement

ಉಡುಪಿ: ಖಾಸಗಿ ಬಸ್ ಮಾಲಕನ ಕಚೇರಿಗೆ ನುಗ್ಗಿ, ಹತ್ಯೆಗೆ ಯತ್ನ ನಡೆಸಿದ ದುಷ್ಕರ್ಮಿಗಳು !

04:04 PM Nov 04, 2020 | sudhir |

ಉಡುಪಿ: ಮಣಿಪಾಲದ ಲಕ್ಷೀಂದ್ರ ನಗರದಲ್ಲಿರುವ ಎ.ಕೆ.ಎಂ.ಎಸ್ ಬಸ್ ಮಾಲೀಕನ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ತಲವಾರಿನೊಂದಿಗೆ ಬಂದು ಬೆದರಿಕೆ ಹಾಕಿ ತೆರಳಿದ ಘಟನೆ ಬುಧವಾರ ನಡೆದಿದೆ.

Advertisement

ಬಸ್ ಕಚೇರಿಗೆ ಡಸ್ಟರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರು ಹಿಡಿದು ಬಂದಿದ್ದು ಈ ವೇಳೆ ಬಸ್ ಮಾಲಿಕ ಸೈಫುದ್ದೀನ್ ಕಚೇರಿಯಲ್ಲಿ ಇಲ್ಲದ ಪರಿಣಾಮ ಇತರ ಸಿಬ್ಬಂದಿಗೆ ಬೆದರಿಸಿ ಈ ತಂಡದವರು ಪರಾರಿಯಾಗಿದ್ದಾರೆ.

ಬಸ್ ಮಾಲೀಕ ಸೈಪುದ್ದೀನ್ ಈ ಹಿಂದೆ ಕೆಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಜಾಮೀನು ಪಡೆದು ಹೊರಗೆ ಬಂದಿದ್ದ,  ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಉಡುಪಿ: ನಕಲಿ ವೈದ್ಯ ನಡೆಸುತ್ತಿದ್ದ, ಡೆಂಟಲ್ ಕ್ಲಿನಿಕ್ ಗೆ ಬೀಗ ಜಡಿದ ಅಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next