Advertisement

ಉಡುಪಿ ಎಸ್ಪಿ ಕೆ.ಟಿ. ಬಾಲಕೃಷ್ಣ ವರ್ಗಾವಣೆ,ನೂತನ ಎಸ್ಪಿ ಸಂಜೀವ ಪಾಟೀಲ್

06:29 PM Aug 04, 2017 | |

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಅವರನ್ನು ರಾಜ್ಯ ಸರಕಾರ ಪ್ರಸ್ತುತ ಎಸ್‌ಪಿ ಮತ್ತು ಡೆಪ್ಯೂಟಿ ಕಮಾಂಡೆಂಟ್‌ ಜನರಲ್‌, ಹೋಮ್‌ ಗಾರ್ಡ್‌ ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಿದೆ.

Advertisement

ಉಡುಪಿ ಜಿಲ್ಲೆಗೆ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಐಪಿಎಸ್‌ ಅಧಿಕಾರಿ ಸಂಜೀವ್‌ ಪಾಟೀಲ್‌ ಅವರನ್ನು ನೇಮಿಸಲಾಗಿದೆ.

ಡಾ| ಸಂಜೀವ ಪಾಟೀಲ್‌ ಅವರು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ಕಚೇರಿಯಲ್ಲಿ ಎಸ್‌ಪಿಯಾಗಿದ್ದರು. ಅದಕ್ಕೂ ಮುನ್ನ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಕೆ.ಟಿ. ಬಾಲಕೃಷ್ಣ ಅವರು 2016ರ ಜುಲೈ ಅಂತ್ಯದಲ್ಲಿ ಗದಗ ಜಿಲ್ಲೆಯಿಂದ ಉಡುಪಿಗೆ ವರ್ಗವಾಗಿದ್ದರು. ಕಳೆದ ವರ್ಷ ಆ. 11ರಂದು ಉಡುಪಿ ಜಿಲ್ಲಾ ಎಸ್‌ಪಿಯಾಗಿ ಅವರು ಅಧಿಕಾರ ಸ್ವೀಕರಿಸಿಕೊಂಡಿದ್ದರು. ಪ್ರಸ್ತುತ ಎಸ್‌ಪಿ ಮತ್ತು ಡೆಪ್ಯೂಟಿ ಕಮಾಂಡೆಂಟ್‌ ಜನರಲ್‌, ಹೋಮ್‌ ಗಾರ್ಡ್‌ ಬೆಂಗಳೂರು ಇಲ್ಲಿಗೆ ಬಾಲಕೃಷ್ಣ ಅವರು ವರ್ಗಾವಣೆಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next