Advertisement

ಉಡುಪಿ: ವ್ಯಕ್ತಿ ನಾಪತ್ತೆ-ನಗರ ಠಾಣೆಯಲ್ಲಿ ದೂರು ದಾಖಲು

05:52 PM Jul 25, 2023 | Team Udayavani |

ಉಡುಪಿ: ನಿಟ್ಟೂರು ಸಮೀಪ ವಾಸವಾಗಿದ್ದ ಬಾಗಲಕೋಟೆ ನಿವಾಸಿ ಸುರೇಶ ಗುಳೇದ (42) ಎಂಬವರು ಕಾಣೆಯಾಗಿರುವುದಾಗಿ ಪತ್ನಿ ಮಂಜುಳಾ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:Anju: ಇಸ್ಲಾಂಗೆ ಮತಾಂತರವಾಗಿ ಪಾಕಿಸ್ತಾನದ ನಸ್ರುಲ್ಲಾ ಜೊತೆ ಮದುವೆಯಾದ ಭಾರತದ ಅಂಜು; ವರದಿ

ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿರುವ ಸುರೇಶ್‌ ಅವರು ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು, ಉಡುಪಿ, ಗೋವಾ, ಮಹಾರಾಷ್ಟ್ರ ಕಡೆಗೆ ಹೋಗಿ ಬರುತ್ತಿದ್ದರು.

ಜೂನ್‌ 18ರಂದು ಸುರೇಶ್‌ ಅವರು ಚಾಲಕ ವೃತ್ತಿಯಲ್ಲಿ ಹೊರ ಹೋದವರು, ಪತ್ನಿಗೆ ಕರೆ ಮಾಡಿ 15 ದಿನ ಬಿಟ್ಟು ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಈವರೆಗೂ ಸುರೇಶ್‌ ಅವರು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next